ಈ ಯೋಜನೆ ಪಡೆದುಕೊಳ್ಳಿ, ನಿವೃತ್ತ ಬದುಕಿನಲ್ಲಿ ಪ್ರತಿ ತಿಂಗಳು ನಿಮ್ಮ ಕೈಸೇರಲಿದೆ 5000ರೂ.!?
Team Udayavani, Apr 10, 2021, 1:24 PM IST
ನವ ದೆಹಲಿ : ನಿಮ್ಮ ನಿವೃತ್ತ ಬದುಕಿಗೆ ಈ ಯೋಜನೆ ಹೇಳಿ ಮಾಡಿಸಿದಂತಿದೆ. ನಿಮಗೆ 18 ವರ್ಷ ವಯಸ್ಸು ತುಂಬಿದರೆ ನೀವು ಈ ಯೋಜನೆಯನ್ನು ಮಾಡಿಸಿಕೊಳ್ಳುವುದರಿಂದ ನಿಮ್ಮ ನಿವೃತ್ತಿ ಬದುಕಿಗೆ ಉತ್ತಮ ಆದಾಯದ ಮೂಲವಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಪಡಬೇಕಾಗಿಲ್ಲ.
ಹೌದು, ಅಟಲ್ ಪೆನ್ಷನ್ ಯೋಜನೆಯು ಅತ್ಯುತ್ತಮ ಪಿಂಚಣಿ ಯೋಜನೆಯಾಗಿದೆ. 18 ವರ್ಷ ತುಂಬಿದ ನಮ್ಮ ದೇಶದ ಪ್ರತಿಯೊಬ್ಬರು ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಓದಿ : ಕಿಡಿಗೇಡಿಗಳ ಕಿಚ್ಚಿಗೆ ಭಸ್ಮವಾದ ಇಸಾಕ್ ಗ್ರಂಥಾಲಯದ 11 ಸಾವಿರಕ್ಕೂ ಹೆಚ್ಚು ಪುಸ್ತಕಗಳು
ಅಟಲ್ ಪಿಂಚಣಿ ಯೋಜನೆಗೆ ಸೇರಿಕೊಂಡು ಮಾಸಿಕ 5 ಸಾವಿರ ರೂಪಾಯಿ ಅಥವಾ 60 ಸಾವಿರ ರೂಪಾಯಿ ವಾರ್ಷಿಕ ಪಿಂಚಣಿಗೆ ಖಾತೆ ತೆರೆಯಬೇಕು. ನಂತರ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಜಮಾ ಮಾಡಬೇಕು.ವರ್ಷಕ್ಕೆ 2520 ರೂಪಾಯಿಗಳಾಗುತ್ತದೆ. 60 ವರ್ಷ ವಯಸ್ಸಿನವರೆಗೆ ಮಾಸಿಕ 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ನಿಮಗೆ 60 ವರ್ಷವಾದಾಗ, ನಿಮ್ಮ ಖಾತೆಗೆ ಪ್ರತಿ ತಿಂಗಳು 5000 ರೂಪಾಯಿ ಬರುತ್ತದೆ. ಅಂದರೆ ವರ್ಷಕ್ಕೆ 60,000 ರೂಪಾಯಿ ಈ ಯೋಜನೆಯಿಂದ ನಿಮ್ಮ ಕೈ ಸೇರಲಿದೆ
ಈ ಯೋಜನೆಯಲ್ಲಿ ಎರಡು ವಿಧದ ಯೋಜನೆಗಳಿದ್ದು, ತ್ರೈಮಾಸಿಕವಾಗಿ ಹಾಗೂ ಅರ್ಧ ವಾರ್ಷಿಕಕ್ಕೆ ಈ ಯೋಜನೆಯನ್ನು ನಾವು ಪಡೆದುಕೊಳ್ಳಬಹುದು.
ತ್ರೈಮಾಸಿಕ ಯೋಜನೆ:
ಪ್ರತಿ 3 ತಿಂಗಳಿಗೊಮ್ಮೆ 626 ರೂಪಾಯಿ ಹೂಡಿಕೆ ಮಾಡಬೇಕು. 42 ವರ್ಷಗಳ ಕಾಲ ಹೂಡಿಕೆ ಮಾಡಬೇಕು. 42 ವರ್ಷಗಳಲ್ಲಿ 1.05 ಲಕ್ಷ ರೂಪಾಯಿ ನಿಮ್ಮ ಒಟ್ಟು ಹೂಡಿಕೆಯಾಗಿರುತ್ತದೆ. ಆ ನಂತರ ನಿಮಗೆ 60 ವರ್ಷ ತುಂಬಿದ ಬಳಿಕ ಜೀವನ ಪರ್ಯಂತ ನೀವು ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಧ ವಾರ್ಷಿಕ ಯೋಜನೆ:
ನೀವು ಪ್ರತಿ 6 ತಿಂಗಳಿಗೊಮ್ಮೆ 1239 ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಈ ಹೂಡಿಕೆಯನ್ನು 42 ವರ್ಷಗಳವರೆಗೆ ಮಾಡಬೇಕಾಗುತ್ತದೆ. 1.04 ಲಕ್ಷ ರೂಪಾಯಿ ನಿಮ್ಮ ಒಟ್ಟು ಹೂಡಿಕೆಯಾಗಿರುತ್ತದೆ. 60 ವರ್ಷವಾದಾಗ ಜೀವನ ಪರ್ಯಂತ ನೀವು ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ.
ಓದಿ : ಪೂರ್ಣ ಧ್ವನಿ ಮುದ್ರಿಕೆಯ ಭಾಗವನ್ನು ಬಿಡುಗಡೆ ಮಾಡಿ : ಪ್ರಶಾಂತ್ ಕಿಶೋರ್ ಸವಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ