ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತತ್ಕಾಲ್‌ಗೆ ಆದ್ಯತೆ!

2021ರ ಹೊತ್ತಿಗೆ ಗುತ್ತಿಗೆ ಆಧಾರಿತ, ತಾತ್ಕಾಲಿಕ ಉದ್ಯೋಗಿಗಳ ನೇಮಕ ಹೆಚ್ಚಳ ನಿರೀಕ್ಷೆ

Team Udayavani, Jun 3, 2020, 11:39 AM IST

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತತ್ಕಾಲ್‌ಗೆ ಆದ್ಯತೆ!

ಸಾಂದರ್ಭಿಕ ಚಿತ್ರ

ಒಂದು ಕಡೆ ಕೋವಿಡ್ ಹಾವಳಿ ಏರುತ್ತಲೇ ಇದೆ. ಮತ್ತೂಂದು ಕಡೆ ಭಾರತೀಯರು ದಿಗ್ಬಂಧನದಿಂದ ಹೊರಬಂದು ಸಹಜ ಜೀವನಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ಸೇವೆಗಳಲ್ಲಿ ಒಂದು ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಾಶ್ವತ ನೌಕರರ ಬದಲು, ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳನ್ನು ತೆಗೆದುಕೊಳ್ಳುವ ಪ್ರಮಾಣ ಏರುತ್ತದೆ. ಅಂದರೆ ತತ್ಕಾಲಕ್ಕೆ ಕೆಲಸ ಮಾಡುವರ ಸಂಖ್ಯೆ ಜಾಸ್ತಿಯಾಗುತ್ತದೆ. ಯಾಕೆ? ಹೇಗೆ?

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಷ್ಟದಲ್ಲಿದೆ
ಸದ್ಯ ಕೋವಿಡ್ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ವ್ಯವಹಾರ ನಡೆಸಿರುವ ಕಂಪನಿಗಳ ವಹಿವಾಟು ಕುಗ್ಗಿದೆ. ಈ ಎಲ್ಲ ಕಂಪನಿಗಳು ತಮ್ಮ ಆದಾಯಕ್ಕಾಗಿ ನೆಚ್ಚಿಕೊಂಡಿರುವುದು ಅಮೆರಿಕ ಮತ್ತು ಯೂರೋಪ್‌ ದೇಶಗಳನ್ನು. ಆದರೆ ಕೊರೊನಾದಿಂದ ಆ ದೇಶಗಳೇ ನಲುಗಿವೆ! ಆದ್ದರಿಂದ ಉದ್ಯೋಗಿಗಳನ್ನು ಸಾಕುವ ಸ್ಥಿತಿಯಲ್ಲಿ ಅವಿಲ್ಲ.

ಯಾಕೆ ಗುತ್ತಿಗೆ ಕೆಲಸಗಾರರಿಗೇ ಆದ್ಯತೆ?
ನಿಧಾನಕ್ಕೆ ಯೂರೋಪ್‌ ಮತ್ತು ಅಮೆರಿಕದಲ್ಲಿ ಮತ್ತೆ ಎಲ್ಲ ರೀತಿಯ ಸೇವೆಗಳು ಆರಂಭವಾಗುತ್ತಿವೆ. ಹಾಗೆಯೇ ವಿವಿಧ ಕಂಪನಿಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್‌ ಮಾಡಿಕೊಳ್ಳುವತ್ತ ಗಮನ ಹರಿಸಿವೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಗಳಿಗೆ ಮಹತ್ವ ಸೃಷ್ಟಿಯಾಗುತ್ತಿದೆ. ಆದರೆ ಕಂಪನಿಗಳು ಶಾಶ್ವತವಾಗಿ ಕೆಲಸಕ್ಕೆ ತೆಗೆದುಕೊಳ್ಳುವ ಬದಲು, ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ
ಆದ್ಯತೆ ನೀಡುತ್ತವೆ. ಇದಕ್ಕಿರುವ ಕಾರಣಗಳು ಹೀಗಿವೆ…

ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ: ಐಟಿ ಕಂಪನಿಗಳು ತಾವು ಒಪ್ಪಿಕೊಳ್ಳುವ ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ ಮಾಡಿಕೊಳ್ಳುವುದಕ್ಕೆ ಗಮನ ಹರಿಸುತ್ತವೆ. ಆ ಯೋಜನೆ ಮುಗಿದ ಮೇಲೆ ಉದ್ಯೋಗಿಗಳ ಕೆಲಸವೂ ಮುಗಿಯುತ್ತದೆ.

ಬದಲಾವಣೆ ಸುಲಭ: ಐಟಿ ಕಂಪನಿಗಳು ತರಹೇವಾರಿ ಯೋಜನೆಗಳನ್ನು ಒಪ್ಪಿಕೊಳ್ಳುತ್ತವೆ. ಇದಕ್ಕೆ ಅದೇ ರೀತಿಯ ಕುಶಲ ಕೆಲಸಗಾರರು ಬೇಕು. ಆಗ ಬೇಡದವರನ್ನು ಬಿಟ್ಟು ಹೊಸಬರನ್ನು ತೆಗೆದುಕೊಳ್ಳಬಹುದು.

ಫ‌ಲಿತಾಂಶ ಜಾಸ್ತಿ: ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಾಗ, ಕೆಲಸಗಾರರಿಗೆ ಗುರಿ ನೀಡಲಾಗಿರುತ್ತದೆ. ಆದ್ದರಿಂದ ಕಂಪನಿಗಳಿಗೆ ಫ‌ಲಿತಾಂಶ ಜಾಸ್ತಿ ಸಿಗುತ್ತದೆ. ಸಂಬಳದ ಸೋರಿಕೆಯೂ ಕಡಿಮೆ.

ಐಟಿಗೆ ವಿತ್ತ ವಲಯದಿಂದಲೂ ಸೇರ್ಪಡೆ
ಕಳೆದ ಕೆಲವು ವಾರಗಳಿಂದ ಸಿಬ್ಬಂದಿ ನೇಮಕ ಸಂಸ್ಥೆಗಳು ಒಂದು ವಿಶಿಷ್ಟ ಸಂಗತಿ ಗಮನಿಸಿವೆ. ಐಟಿ ಸಂಸ್ಥೆಗಳಿಗೆ ಬ್ಯಾಂಕ್‌, ಆರ್ಥಿಕ ಸೇವೆಗಳು, ವಿಮಾ ತಜ್ಞರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳಾಗಿ ಸೇರಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ವಿತ್ತ ಆಧಾರಿತ ಸಂಸ್ಥೆಗಳು, ವಿಮಾ ಕಂಪನಿಗಳು, ಮ್ಯೂಚ್ಯುವಲ್‌ ಫ‌ಂಡ್‌ಗಳು, ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು, ಬಲಿಷ್ಠ ಮಾಡಲು ಹೊರಟಿವೆ. ಆಗ ತಜ್ಞರ ನೆರವು ಬೇಕಾಗುವುದರಿಂದ ಈ ರೀತಿಯ ಬದಲಾವಣೆಯಾಗಿದೆ.

ಯಾವ್ಯಾವ ಉದ್ಯೋಗಗಳಿಗೆ ಬೇಡಿಕೆ?
ಎಲ್ಲ ಕಡೆ ಕಂಪ್ಯೂಟರೀಕೃತ ವ್ಯವಸ್ಥೆ, ಆನ್‌ಲೈನ್‌ ಸೇವೆಗಳು, ಅದಕ್ಕೆ ಪೂರಕವಾದ ಇತರೆ ವ್ಯವಸ್ಥೆಗಳಿಗೆ ಗರಿಷ್ಠ ಆದ್ಯತೆ ಶುರುವಾಗಿದೆ. ಆದ್ದರಿಂದ ಈಗ ಮಾಹಿತಿ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಬೇಡಿಕೆಯಿದೆ. ಅವು ಹೀಗಿವೆ…

? ಡಿಜಿಟಲ್‌ ಪರಿವರ್ತನೆ ತಜ್ಞರು (ಟ್ರಾನ್ಸ್‌ಫಾರ್ಮೇಶನ್‌ ಎಕ್ಸ್‌ಪರ್ಟ್ಸ್)
? ಮಾಹಿತಿ ವಿಜ್ಞಾನಿಗಳು (ಡಾಟಾ ಸೈಂಟಿಸ್ಟ್ಸ್) ಮತ್ತು ಸಂಖ್ಯಾತಜ್ಞರು (ಸ್ಟಾಟಿಸ್ಟಿಶಿಯನ್ಸ್‌)
? ಮಾಹಿತಿ ತಂತ್ರಜ್ಞಾನ ಭದ್ರತೆ (ಐಟಿ ಸೆಕ್ಯುರಿಟಿ) ಮತ್ತು ನೆಟ್‌ವರ್ಕ್‌ ವಿನ್ಯಾಸಕರು (ಆರ್ಕಿಟೆಕ್ಟ್ಸ್)
? ಕ್ಲೌಡ್‌, ಉದ್ದಿಮೆ ಬುದಿಟಛಿಮತ್ತೆ (ಬ್ಯುಸಿನೆಸ್‌ ಇಂಟೆಲಿಜೆನ್ಸ್‌), ಕೃತಕ ಬುದಿಟಛಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌)
? ತಂತ್ರಾಂಶ ತಯಾರಕರು (ಸಾಫ್ಟ್ವೇರ್‌ ಡೆವಲಪರ್ಸ್‌)

ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7 ಲಕ್ಷಕ್ಕೇರಿಕೆ?
ದೇಶದಲ್ಲಿರುವ 40 ಲಕ್ಷ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಪೈಕಿ 5 ಲಕ್ಷ ಮಂದಿ ಗುತ್ತಿಗೆ ಆಧಾರದ ಕೆಲಸ ಹೊಂದಿದ್ದಾರೆ (2018ರ ಮಾಹಿತಿ).
2021ರ ಹೊತ್ತಿಗೆ ಈ ಪ್ರಮಾಣ ಶೇ.13ರಷ್ಟು ಏರಿ, ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7.2 ಲಕ್ಷಕ್ಕೇರುವ ನಿರೀಕ್ಷೆಯಿದೆ ಎಂದು ಭಾರತ ಸಿಬ್ಬಂದಿ ಒಕ್ಕೂಟ (ಇಂಡಿಯನ್‌ ಸ್ಟಾಫಿಂಗ್‌ ಫೆಡರೇಶನ್‌) ತಿಳಿಸಿದೆ.

377 ಶೇ. ದೂರದಿಂದಲೇ ಕೆಲಸ ಮಾಡುವ ಅವಕಾಶಗಳಿಗಾಗಿ, ಫೆಬ್ರವರಿಯಿಂದ ಮೇವರೆಗೆ ಹುಡುಕಾಡಿದವರ ಪ್ರಮಾಣ.
168 ಶೇ. ಫೆಬ್ರವರಿಯಿಂದ ಮೇ ಅವಧಿಯಲ್ಲಿ,ಮನೆಯಿಂದಲೇ ಕೆಲಸ ಮಾಡುವ ವ್ಯಕ್ತಿಗಳನ್ನು ಕಂಪನಿಗಳು ಆಯ್ದುಕೊಂಡ ಪ್ರಮಾಣ.

ಟಾಪ್ ನ್ಯೂಸ್

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock-market-Exchange

Stock market ಹೂಡಿಕೆದಾರರಿಗೆ 5.18 ಲಕ್ಷ ಕೋಟಿ ರೂ.ನಷ್ಟ

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Iran-Israel ಯುದ್ಧ:‌ ಬಾಂಬೆ ಷೇರುಪೇಟೆ ಸೂಚ್ಯಂಕ 500 ಅಂಕ ಕುಸಿತ, 6 ಲಕ್ಷ ಕೋಟಿ ನಷ್ಟ!

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Bournvita ಪ್ಯಾಕ್‌ ಮೇಲಿನ ಹೆಲ್ತ್‌ ಡ್ರಿಂಕ್ಸ್‌ ಪದ ತೆಗೆದುಹಾಕಿ: ಕೇಂದ್ರದ ಆದೇಶ

Mumbai: Sensex jumped to 75000 during Modi’s tenure

Mumbai: ಮೋದಿ ಅವಧಿಯಲ್ಲಿ ಸೆನ್ಸೆಕ್ಸ್‌ 75000ಕ್ಕೆ ಜಿಗಿತ

1-wqeqweqw

Apple ನಿಂದ 600ಕ್ಕೂ ಅಧಿಕ ಉದ್ಯೋಗಿಗಳ ವಜಾ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.