ದೀಪಾವಳಿ ಬಳಿಕ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಸಾಧ್ಯತೆ


Team Udayavani, Oct 21, 2019, 10:32 PM IST

Two-Wheeler-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಸದ್ಯದ ಮಾರುಕಟ್ಟೆಯಲ್ಲಿರುವ ಬಿಎಸ್‌4 (ಭಾರತ್‌ ಸ್ಟೇಜ್‌) ವಾಹನಗಳು ಈ ಹಣಕಾಸು ವರ್ಷದಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಎಪ್ರಿಲ್‌ 1ರಿಂದ ಬಿಎಸ್‌ 6 ಮಾದರಿ ವಾಹನಗಳು ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ವಾಹನಗಳು ಸೇರಿದಂತೆ ಬಿಎಸ್‌ 6 ಮಾದರಿ ದ್ವಿಚಕ್ರ ವಾಹನಗಳ ದರ ದೀಪಾವಳಿ ಬಳಿಕ ಏರಿಕೆಯಾಗಲಿದೆ.

2000ನೇ ಇಸವಿಯಲ್ಲಿ ಬಿಎಸ್‌ ಮಾಲಿನ್ಯ ನಿಯಮ ಪರಿಚಯಿಸಲಾಯಿತು. 2010ರಲ್ಲಿ ಬಿಎಸ್‌ 3 ವಾಹನಗಳು ಮಾರುಕಟ್ಟೆಗೆ ಬಂದವು. ಬಿಎಸ್‌ 4 ಮಾದರಿಯ ವಾಹನಗಳ ಮುಂದಿನ ಅವತರಣಿಕೆಯೇ ಬಿಎಸ್‌ 6. ಪರಿಸರ ಸ್ನೇಹಿ ಎಂಜಿನ್‌ಗಳನು ಈ ವಾಹನಗಳು ಹೊಂದಿರಲಿದೆ. ಬಿಎಸ್‌ 3, ಬಿಎಸ್‌4 ಬಳಿಕ ಬಿಎಸ್‌ 6 ಮುಂದಿನ ವರ್ಷ ಜಾರಿಗೆ ಬರಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಎಸ್‌6 ದ್ವಿಚಕ್ರ ವಾಹನಗಳು ಮಾತ್ರ ಇದೆ. ಕಾರು, ಅಟೋ ರಿಕ್ಷಾ ಮತ್ತು ಕಮರ್ಷಿಯಲ್‌ ವಾಹನಗಳು ಮಾರ್ಚ್‌ ತಿಂಗಳ ಬಳಿಕ ಮಾರುಕಟ್ಟೆಗೆ ಬರಲಿದೆ. ಇನ್ನು ಕೆಲವು ಐಷರಾಮಿ ವಿದೇಶಿ ಕಾರುಗಳು ಈಗಾಗಲೇ ಲಭ್ಯ ಇವೆ.

ಶೇ. 10-15 ಏರಿಕೆ
ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್‌6 ಮಾದರಿಯ ದ್ವಿ ಚಕ್ರವಾಹನಗಳು ಸಾಮಾನ್ಯ ದರಕ್ಕೆ ಮಾರಾಟವಾಗುತ್ತಿದೆ. ಆದರೆ ಈ ತಿಂಗಳಾಂತ್ಯದಲ್ಲಿ ಬರುವ ದೀಪಾವಳಿ ಹಬ್ಬದ ಬಳಿಕ ಅವುಗಳ ದರ ಶೇ. 10 ರಿಂದ 15 ಹೆಚ್ಚಾಗಲಿದೆ. ದೀಪಾವಳಿ ಬಳಿಕ ಕನಿಷ್ಠ 4 ಸಾವಿರ ರೂ.ಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದಾ: 100 ಸಿಸಿ ಸಾಮರ್ಥ್ಯದ ಬೈಕ್‌ನ ಎಕ್ಸ್‌ ಶೋರೂಂ ದರ 40,000 ರೂ. ಇದ್ದರೆ ಅವುಗಳಿಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಹೆಚ್ಚಾಗಲಿದೆ. 1 ಲಕ್ಷದ ಬೈಕ್‌ನ ದರ 10 ಸಾವಿರದಿಂದ 15 ಸಾವಿರ ರೂ. ಹೆಚ್ಚಾಗುವ ಸಾಧ್ಯತೆ ಇದೆ.

ಬಿಎಸ್‌ 4 ಗಡುವು
ಈಗ ಮಾರುಕಟ್ಟೆಯಲ್ಲಿರುವ ಬಿಎಸ್‌4 ಮಾದರಿಯ ವಾಹನಗಳನ್ನು 2020ರ ಮಾರ್ಚ್‌ ಒಳಗೆ ಮಾರಾಟಗೊಳಿಸಬೇಕಾಗಿದೆ. ಎಪ್ರಿಲ್‌ 1ರ ಬಳಿಕ ಮಾರಾಟಗೊಳ್ಳುವ ಎಲ್ಲಾ ವಾಹನಗಳು ಬಿಎಸ್‌6 ಮಾದರಿರ ಎಂಜಿನ್‌ ಹೊಂದಿರಬೇಕು. ಬಿಎಸ್‌6ರಲ್ಲಿ ಬಿಎಸ್‌4 ವಾಹನಕ್ಕೆ ಹೋಲಿಸಿದರೆ ಮಾಲಿನ್ಯ ಪ್ರಮಾಣ ಕಡಿಮೆ. ಪೆಟ್ರೋಲ್‌ ವಾಹನಗಳಲ್ಲಿ ಶೇ. 25 ಮತ್ತು ಡಿಸೇಲ್‌ ವಾಹನಗಳಲ್ಲಿ ಶೇ. 75 ಮಾಲಿನ್ಯ ಕಡಿಮೆ.

ದರ ಹೆಚ್ಚಳ ಯಾಕೆ
ಈಗಾಲೇ ಆರ್ಥಿಕ ಸಂಕಷ್ಟದಿಂದ ಅಟೋಮೊಬೈಲ್‌ ವಲಯ ತತ್ತರಿಸಿದೆ. ಬಿಎಸ್‌ 4 ಮಾದರಿಯ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಪಾರಗೊಳ್ಳದೇ ಉಳಿದಿದ್ದು, ಅವುಗಳನ್ನು ಬಿಎಸ್‌6 ಎಂಜಿನ್‌ಗೆ ಬದಲಾಯಿಸಬೇಕಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಗ್ರಾಹಕನ ಮೇಲೆ ಸಂಸ್ಥೆಗಳು ಹಾಕಬೇಕಾಗಿದೆ. ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಪ್ರಮಾಣದ ವಾಹನಗಳನ್ನು ಬದಲಾಯಿಸುವುದು ಕಷ್ಟವಾದ ಕಾರಣ ದರ ದುಬಾರಿಯಾಗಲಿದೆ.

ಜಿಎಸ್‌ಟಿ ಕಡಿಮೆಯಾದರೆ ಹೆಚ್ಚಳ ಇಲ್ಲ
ಈಗಿನ ಅಟೋ ಮಾರುಕಟ್ಟೆಯ ಹಿನ್ನಡೆಗೆ ಜಿಎಸ್‌ಟಿ ಹೆಚ್ಚಿರುವುದು ಒಂದು ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಇಳಿಕೆಯಾದರೆ ಬಿಎಸ್‌6 ವಾಹನಗಳ ದರದಲ್ಲಿ ಕೊಂಚ ಇಳಿಕೆ ಕಾಣಬಹುದು.

ಹೋಂಡಾ ಪ್ರಥಮ
ಭಾರತದಲ್ಲಿ ಮೊದಲ ಬಿಎಸ್‌6 ದ್ವಿ ಚಕ್ರ ವಾಹನವನ್ನು ಹೋಂಡಾ ಸಂಸ್ಥೆ ಪರಿಚಯಿಸಿದೆ. ಸೆಪ್ಟಬರ್‌ನಲ್ಲಿ ಆಕ್ಟಿವಾ 125 ಸ್ಕೂಟರ್‌ ಮಾರುಕಟ್ಟೆಗೆ ಬಂದಿದ್ದು ಒಳ್ಳೆಯ ಬೇಡಿಕೆ ಇದೆ. ಇದರ ದರ ಬಿಎಸ್‌4 ನ ಇದೇ ಮಾಡೆಲ್‌ಗೆ ಹೋಲಿಸಿದರೆ ಶೇ. 10-15 ಹೆಚ್ಚು. ಟಿವಿಎಸ್‌ ಸಂಸ್ಥೆ ಈಗಾಗಲೇ ತನ್ನ 19 ಮಾದರಿಯ ವಾಹನಗಳ ಉತ್ಪನ್ನವನ್ನು ಆರಂಭಿಸಿದ್ದು, ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಹೀರೋ ಈಗಾಗಲೇ ತನ್ನ ಐಸ್ಮಾರ್ಟ್‌ 110 ಸಿಸಿ ಬೈಕ್‌ ಅನ್ನು ತಯಾರಿಸಿದ್ದು, ಮುಂದಿನ ತಿಂಗಳು ಅದು ಮಾರುಕಟ್ಟೆಗೆ ಬರಲಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.