10ರ ಬಾಲಕನನ್ನು ಕೊಂದು ಶವ ಕೆರೆಯಲ್ಲಿ ಬಿಸುಟ ದುಷ್ಕರ್ಮಿಗಳು
Team Udayavani, Sep 27, 2017, 11:16 AM IST
ಥಾಣೆ : ನೆರೆಯ ಪಾಲಗಢ ಜಿಲ್ಲೆಯ ಸರೋವರವೊಂದರಲ್ಲಿ 10 ವರ್ಷ ಪ್ರಾಯದ ಬಾಲಕನ ಮೃತ ದೇಹ ತೇಲುತ್ತಿರುವುದು ಕಂಡು ಬಂದಿದೆ. ಹಂತಕರು ಬಾಲಕನನ್ನು ಎಲ್ಲೋ ಒಂದೆಡೆ ಕೊಂದು ಬಳಿಕ ಆತನ ಶವವನ್ನು ಈ ಕೆರೆಗೆ ಎಸೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಐದನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನನ್ನು ಆತನ ತಂದೆ ಮೊನ್ನೆ ಸೋಮವಾರ ಶಾಲೆಯಿಂದ ಮಧ್ಯಾಹ್ನ 12.30ಕ್ಕೆ ಕರೆದೊಯ್ದಿದ್ದರು. ಆದರೆ ಅವರಿಬ್ಬರೂ ಮನೆ ತಲುಪಿಲ್ಲ ಎಂದು ಬಾಲಕನ ತಾಯಿ ಪೊಲೀಸರಿಗೆ ನೀಡಿದ್ದರು.
ಕೆರೆಯಲ್ಲಿ ಪತ್ತೆಯಾಗಿರುವ ಬಾಲಕನ ಶವದ ಬಾಯಿಯನ್ನು ಪ್ಲಾಸ್ಟರ್ನಿಂದ ಬಿಗಿದು ಮುಚ್ಚಲಾಗಿದ್ದು ಅದು ದಹೀಸರ್ ಪ್ರದೇಶದ ಕೆರೆಯಲ್ಲಿ ನಿನ್ನೆ ಮಂಗಳವಾರ ತೇಲುತ್ತಿದ್ದಾಗ ಪತ್ತೆಯಾಯಿತು. ಬಾಲಕನ ತಂದೆ ಇನ್ನೂ ನಾಪತ್ತೆಯಾಗಿದ್ದಾರೆ. ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಡಿವೈಎಸ್ಪಿ (ವಿರಾರ್) ಜಯಂತ ಬಜಬಲೆ ತಿಳಿಸಿದ್ದಾರೆ.
ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆ.302(ಕೊಲೆ), 201 (ಸಾಕ್ಷ್ಯ ನಾಶ) ಅಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ