1000 ವರ್ಷಗಳಷ್ಟು ಹಳೆಯ ವಿಗ್ರಹಗಳು ವಶಕ್ಕೆ; ನಟರಾಜ, ಶಿವಕರ್ಮಿ, ರಮಣ ಮಹರ್ಷಿ ವಿಗ್ರಹಗಳು
Team Udayavani, Aug 11, 2022, 6:45 AM IST
ಚೆನ್ನೈ: ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯ 5 ವಿಗ್ರಹ ಸೇರಿದಂತೆ ಒಟ್ಟು 8 ವಿಗ್ರಹಗಳನ್ನು ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ವಿಗ್ರಹ ತಂಡವು ವಶಪಡಿಸಿಕೊಂಡಿದೆ.
ಸ್ವಾಮಿಮಲೈನಲ್ಲಿ ಜಿ. ಮಸಿಲಮಣಿ ಹೆಸರಿನ ವ್ಯಕ್ತಿಗೆ ಸೇರಿದ ಸ್ಥಳದಲ್ಲಿ ವಿಗ್ರಹಗಳನ್ನು ಹೂತಿಡಲಾಗಿತ್ತು. 200ಕೆ.ಜಿ. ತೂಕದ ಬೋಗಶಕ್ತಿ ಅಮ್ಮ ದೇವರ ಮೂರ್ತಿ, ಬುದ್ಧನ 2 ಮೂರ್ತಿಗಳು, ಅಂದಲ್ ಮತ್ತು ವಿಷ್ಣು ದೇವರ ಮೂರ್ತಿಗಳು ಪತ್ತೆಯಾಗಿದ್ದು ಅವೆಲ್ಲವೂ ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗಿದೆ.
ಅದರ ಜತೆಯಲ್ಲಿ 100 ವರ್ಷಗಳಷ್ಟು ಹಳೆಯ ನಟರಾಜ ಮೂರ್ತಿ, ಶಿವಕಮಿ ಮತ್ತು ರಮಣ ಮಹರ್ಷಿ ವಿಗ್ರಹಗಳೂ ಪತ್ತೆಯಾಗಿವೆ.
ಮಸಿಲಮಣಿ ವಿರುದ್ಧ ವಿಗ್ರಹ ಕಳ್ಳತನದ ಆರೋಪವಿದ್ದು, ಮೊದಲಿಗೆ ಕೊಡಂಬಕ್ಕಂನ ಅವರ ನಿವಾಸದಲ್ಲಿ ವಿಗ್ರಹಗಳಿಗಾಗಿ ಶೋಧ ನಡೆಸಲಾಗಿತ್ತು. ನಂತರ ಆ.9ರಂದು ಸ್ವಾಮಿಮಲೈನಲ್ಲಿ ಶೋಧ ನಡೆಸಿದಾಗ ವಿಗ್ರಹಗಳು ಪತ್ತೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ