ಗಣೇಶ ವಿಸರ್ಜನೆ ವೇಳೆ ದೋಣಿ ಮುಳುಗಿ 11 ಜನರ ಸಾವು
Team Udayavani, Sep 13, 2019, 8:18 AM IST
ಭೋಪಾಲ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ದೋಣಿ ಮುಳುಗಿ 11 ಜನರು ಮೃತಪಟ್ಟು ಹಲವರು ನಾಪತ್ತೆಯಾದ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಖತ್ಲಾಪುರ ಘಾಟ್ ನಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ಮುಳುಗಡೆಯಾಗಿರುವ ಇನ್ನೂ ಹಲವರ ಹುಡುಕಾಟ ಭರದಿಂದ ನಡೆಯುತ್ತಿದೆ.
ಸ್ಥಳಿಯ ಪೊಲೀಸರು, ಎಸ್ ಡಿಈಆರ್ ಎಫ್ ಸಿಬ್ಬಂದಿ ಮತ್ತು ಮುಳುಗು ತಜ್ಞರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದುವರೆಗೆ ಆರು ಜನರನ್ನು ರಕ್ಷಣೆ ಮಾಡಲಾಗಿದೆ.
ರಾಜ್ಯದ ಸಚಿವ ಪಿಸಿ ಶರ್ಮಾ ಮೃತರ ಕುಟುಂಬಿಕರಿಗೆ ತಲಾ ನಾಲ್ಕು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.