ಹುಲಿ ಸಾವಿನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ
Team Udayavani, Jan 2, 2018, 7:00 AM IST
ಹೊಸದಿಲ್ಲಿ: ಹುಲಿ ಸಂರಕ್ಷಣೆಗೆ ಕೇಂದ್ರ ಸರಕಾರ ಯಾವುದೇ ಕಾರ್ಯಕ್ರಮ ಜಾರಿ ಮಾಡಿದರೂ ಅದು ಯಶಸ್ವಿಯಾಗಿ ಜಾರಿಯಾಗುತ್ತಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. 2017ರಲ್ಲಿ ಹುಲಿಗಳ ಸಾವಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಒಟ್ಟು 15 ಹುಲಿಗಳು ಅಸುನೀಗಿವೆ. ಈ ಪಟ್ಟಿಯಲ್ಲಿ 25 ಹುಲಿಗಳು ಅಸುನೀಗಿರುವಂಥ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. 17 ಹುಲಿಗಳು ಸತ್ತಿರುವಂಥ ಮಹಾರಾಷ್ಟ್ರಕ್ಕೆ 2ನೇ ಸ್ಥಾನ ಸಿಕ್ಕಿದೆ.
ದೇಶಾದ್ಯಂತ ಕಳೆದ ವರ್ಷ ಒಟ್ಟು 95 ಹುಲಿಗಳು ಕೊನೆಯುಸಿರೆಳೆದಿವೆ. ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರ (ಎನ್ಟಿಸಿಎ) ಸಿದ್ಧಪಡಿಸಿದ ಅಂಕಿ ಅಂಶಗಳಿಂದ ಈ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ‘ದ ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ. ಉತ್ತರಾಖಂಡದಲ್ಲಿ 15, ಅಸ್ಸಾಂನಲ್ಲಿ 8 ಮತ್ತು ಉತ್ತರ ಪ್ರದೇಶದಲ್ಲಿ 7 ಹುಲಿಗಳು ಅಸುನೀಗಿವೆ.
ಅತ್ಯಂತ ಆಘಾತಕಾರಿ ವಿಚಾರವೆಂದರೆ 2016ರಲ್ಲಿ ಮಧ್ಯಪ್ರದೇಶದಲ್ಲಿಯೂ 30 ವ್ಯಾಘ್ರಗಳು ಸಾವನ್ನಪ್ಪಿ ದ್ದವು. ಆ ವರ್ಷ ದೇಶಾದ್ಯಂತ ಒಟ್ಟು 97 ಹುಲಿಗಳು ಸಾವನ್ನಪ್ಪಿದ್ದವು. ಆ ರಾಜ್ಯದ ಅರಣ್ಯಾಧಿಕಾರಿಗಳು, ರೈಲಿಗೆ ಸಿಲುಕಿ, ಹುಲಿಗಳ ನಡುವೆಯೇ ಜಗಳ, ಕಳ್ಳಬೇಟೆಗಳ ಕಾರಣದಿಂದಾಗಿ ಜೀವ ಹಾನಿಯಾಗಿದೆ ಎಂಬ ಅಭಿಪ್ರಾಯ ಮುಂದಿಡುತ್ತಾರೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಮಧ್ಯಪ್ರದೇಶ ಹೊಂದಿತ್ತು. ಆದರೆ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳ ಸಾವು ಉಂಟಾಗುತ್ತಿದ್ದುದರಿಂದ, 2010ರಲ್ಲಿ ಹೆಚ್ಚು ಹುಲಿ ಗಳಿರುವ ರಾಜ್ಯ ಎಂಬ ಸ್ಥಾನ ಕರ್ನಾಟಕಕ್ಕೆ ಒಲಿದಿತ್ತು.
2015ರಲ್ಲಿ ನಡೆದಿದ್ದ ಸಮೀಕ್ಷೆ ಪ್ರಕಾರ, ಆ ರಾಜ್ಯದಲ್ಲಿ 257 ಹುಲಿಗಳು ಇದ್ದವು. ಸಮೀಕ್ಷೆ ಬಳಿಕ ಸಂಖ್ಯೆ 208ಕ್ಕೆ ಇಳಿಕೆಯಾಗಿತ್ತು. 2016ರ ಜನವರಿಯಿಂದ ಮಧ್ಯಪ್ರದೇಶದಲ್ಲಿ 55 ಹುಲಿಗಳು ಪ್ರಾಣ ಕಳೆದುಕೊಂಡಿವೆ. ಕಳ್ಳಬೇಟೆಗಾರರ ವಿರುದ್ಧ ಸರಕಾರ ಕಠಿನ ಕ್ರಮಕ್ಕೆ ಮುಂದಾಗಿದೆ ಎನ್ನುತ್ತಾರೆ ಮಧ್ಯಪ್ರದೇಶ ವನ್ಯಜೀವಿಗಳ ವಿರುದ್ಧದ ಅಪರಾಧ ತಡೆ ವಿಶೇಷ ಕಾರ್ಯಪಡೆಯ ಪ್ರಭಾರ ಮುಖ್ಯಸ್ಥ ರಿತೇಶ್ ಸಿರೋತಿಯಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ