ಅಪಘಾತದಿಂದ ಸತ್ತರೆ 15 ಲಕ್ಷ ವಿಮೆ ಸೌಲಭ್ಯ
Team Udayavani, Oct 4, 2018, 9:59 AM IST
ಹೊಸದಿಲ್ಲಿ: ಇನ್ನು ಮುಂದೆ ಅಪಘಾತ ಸಂಭವಿಸಿದ ಪಕ್ಷ ವಾಹನ ಮಾಲಕರು ಅಥವಾ ಹಿಂಬದಿ ಪ್ರಯಾಣಿಕರಲ್ಲಿ ಯಾರೇ ಸಾವನ್ನಪ್ಪಿದರೂ ಅವ ರಿಗೆ 15 ಲಕ್ಷ ರೂ.ಗಳ ಪರಿಹಾರ ಮೊತ್ತ ಸಿಗಲಿದೆ.
ಈ ಸಂಬಂಧ ವಿಮಾ ನಿಯಂ ತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದು, ವಿಮಾ ಕಂತಿನ ಮೊತ್ತ ವನ್ನು ಹೆಚ್ಚಳ ಮಾಡಿಕೊಳ್ಳಲು ವಿಮಾ ಕಂಪೆನಿ ಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ವಿಮಾ ಪ್ರೀಮಿಯಂನಲ್ಲಿ ಕನಿಷ್ಠ 750 ರೂ. ಹೆಚ್ಚಳ ವಾಗಬಹುದು ಎಂದು ಹೇಳಲಾಗಿದೆ.
2011ರ ಪ್ರಕರಣವೊಂದರ ಹಿನ್ನೆಲೆಯಲ್ಲಿ ಈ ಬದಲಾವಣೆ ಆಗಿದೆ. ವಾಹನ ಮಾಲಕ ಹಿಂಬದಿಯಲ್ಲಿ ಕುಳಿತಿದ್ದು, ಬೇರೊಬ್ಬರು ಬೈಕ್ ಓಡಿಸುತ್ತಿದ್ದರು. ಸೈಕಲ್ ಸವಾರನೊಬ್ಬ ಅಡ್ಡ ಬಂದ ಕಾರಣ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಹಿಂಬದಿ ಸವಾರ ಸಾವನ್ನಪ್ಪಿದ್ದ. ಮೋಟಾರ್ ಅಪಘಾತ ನ್ಯಾಯ ಮಂಡಳಿ ಈ ಪ್ರಕರಣದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಗೆ 53 ಲಕ್ಷ ರೂ.ಗಳ ಪರಿಹಾರ ನೀಡು ವಂತೆ ಆದೇಶಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿದ ವಿಮಾ ಕಂಪೆನಿ ಮೇಲ್ಮನವಿ ಸಲ್ಲಿಸಿದ್ದೂ ಅಲ್ಲದೇ ಹೆಚ್ಚಿನ ಪರಿಹಾರ ಹಣ ಕೇವಲ ಥರ್ಡ್ ಪಾರ್ಟಿಗಷ್ಟೇ ಅನ್ವಯವಾಗಲಿದ್ದು, ಮಾಲಕರಿಗೆ ಅನ್ವಯಿಸುವು ದಿಲ್ಲ. ಅವರಿಗೆ ಕೇವಲ 1 ಲಕ್ಷ ರೂ. ಮಾತ್ರ ಪರಿಹಾರ ಸಿಗಲಿದೆ ಎಂದು ಹೇಳಿತ್ತು.
ಈಗ ಈ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ. ಇನ್ನು ಮುಂದೆ ವಾಹನ ಓಡಿಸುವವರು ಅಥವಾ ಜತೆಯಲ್ಲಿ ಕುಳಿತವರಿಗೆ ಅದು ಯಾವುದೇ ವಾಹನವಾಗಿದ್ದರೂ ಕನಿಷ್ಠ ವಿಮಾ ಪರಿಹಾರವಾಗಿ 15 ಲಕ್ಷ ರೂ. ನೀಡಬೇಕೆಂದು ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ