Noida: ಕಾಂಕ್ರೀಟ್ ಕಂಬಕ್ಕೆ ಶಾಲಾ ಬಸ್ಸು ಢಿಕ್ಕಿ;16 ಮಕ್ಕಳಿಗೆ ಗಾಯ
Team Udayavani, Nov 17, 2018, 11:42 AM IST
ನೋಯ್ಡಾ, ಉತ್ತರ ಪ್ರದೇಶ : ಇಲ್ಲಿನ ಅಂಡರ್ ಪಾಸ್ ಒಂದರಲ್ಲಿ ವೇಗವಾಗಿ ಧಾವಿಸಿ ಬಂದ ಶಾಲಾ ಬಸ್ಸೊಂದು ಕಾಂಕ್ರೀಟ್ ಕಂಬಕ್ಕೆ ಢಿಕ್ಕಿ ಹೊಡೆದ ಅವಘಢದಲ್ಲಿ 16 ಶಾಲಾ ಮಕ್ಕಳ ಸಹಿತ 18 ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.
ರಜನೀಗಂಧ ಚೌಕದಲ್ಲಿನ ಅಂಡರ್ ಪಾಸ್ ದಾಟುವ ವೇಳೆ ಖಾಸಗಿ ಶಾಲಾ ಬಸ್ಸು ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಇಂದು ಶನಿವಾರ ಬೆಳಗ್ಗೆ ಸುಮಾರು 8 ಗಂಟೆಯ ಹೊತ್ತಿಗೆ ನಡೆಯಿತು; ಗಾಯಾಳುಗಳನ್ನು ಒಡನೆಯೇ ಕೈಲಾಶ್ ಆಸ್ಪತ್ರೆಗೆ ಒಯ್ಯಲಾಗಿ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಯಿತು ಎಂದು ಸೆಕ್ಟರ್ 20ರ ಪೊಲೀಸ್ ಠಾಣಾಧಿಕಾರಿ ಮನೋಜ್ ಕುಮಾರ್ ಪಂತ್ ಹೇಳಿದರು.
ಪೊಲೀಸರು ಬಸ್ಸನ್ನು ವಶಪಡಿಸಿಕೊಂಡಿದ್ದು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ