ವಿದ್ಯಾರ್ಥಿನಿಯ ಗ್ಯಾಂಗ್ ರೇಪ್, ವಿಷಪ್ರಾಶನ, ನಾಲ್ವರು ಸೆರೆ
Team Udayavani, Mar 21, 2018, 5:17 PM IST
ಕೋರ್ಬಾ : ಛತ್ತೀಸ್ಗಢದ ಜಂಗೀರ್ – ಚಂಪಾ ಜಿಲ್ಲೆಯಲ್ಲಿ ಓರ್ವ ಬಾಲಕನೂ ಸೇರಿದಂತೆ 19ರ ಹರೆಯದ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ ನಡೆಸಿ ಬಳಿಕ ಆಕೆಗೆ ವಿಷ ಉಣಿಸಿದ್ದು, ಆಕೆಯೀಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವಾರಗಳ ಹಿಂದೆ ನಡೆದಿದ್ದ ಈ ಘಟನೆಯ ಎಲ್ಲ ಆರೋಪಿಗಳನ್ನು ನಿನ್ನೆ ಮಂಗಳವಾರ ಬಂಧಿಸಲಾಯಿತೆಂದು ಪೊಲೀಸರು ಹೇಳಿದ್ದಾರೆ.
ಖರೋದ್ ಗ್ರಾಮದ ಶೇವರಿನಾರಾಯಣ ಪೊಲೀಸ್ ಠಾಣೆ ವ್ಯಪ್ತಿ ಪ್ರದೇಶದಲ್ಲಿ ಈ ಅಮಾನುಷ ಅತ್ಯಾಚಾರದ ಘಟನೆಯು ಕಳೆದ ಮಾರ್ಚ್ 7ರಂದು ನಡೆದಿತ್ತು. ಈ ಬಗ್ಗೆ ನಿನ್ನೆಯಷ್ಟೇ ದೂರು ದಾಖಲಾಗಿದ್ದು ಒಡನೆಯೇ ಕಾರ್ಯಾಚರಿಸಿದ ಪೊಲೀಸರು ಎಲ್ಲ ಆರೋಪಿಗಳನ್ನು ಸೆರೆ ಹಿಡಿದರು ಎಂದು ಶೇವರಿ ನಾರಾಯಣ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
12ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಹುಡುಗಿಯು ಮಾ.7ರಂದು ತನ್ನ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯ ಮೊಬೈಲ್ ಫೋನಿಗೆ ಆರೋಪಿ ಸಾಗರ್ ಯಾದವ್ (24) ಎಂಬಾತನಿಂದ ಕರೆ ಬಂತು. “ನಿನ್ನ ಸ್ನೇಹಿತೆಯೊಬ್ಬಳು ಇಲ್ಲೇ ಎಲ್ಲೋ ನಿನಗಾಗಿ ಕಾಯತ್ತಿದ್ದಾಳೆ; ನಿನಗೆ ಅಲ್ಲಿ ಡ್ರಾಪ್ ಕೊಡುತ್ತೇನೆ’ ಎಂದು ಹೇಳಿ ಆಕೆಯನ್ನು ತನ್ನ ಬೈಕ್ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಒಯ್ದಿದ್ದ.
ಅಲ್ಲಿ ಆತನ ಸ್ನೇಹಿತರಾದ ಲವ ನೋನಿಯಾ (28), ಕುಶ್ಕುಮಾರ್ ನೋನಿಯಾ (26) ಮತ್ತು 16ರ ಹರೆಯದ ಒಬ್ಬ ಹುಡುಗ ಸೇರಿಕೊಂಡು ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಎಸಗಿ ಬಳಿಕ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಗೆ ವಿಷ ಉಣಿಸಿದರು.
ಹುಡುಗಿ ಹೇಗೋ ಕಷ್ಟಪಟ್ಟು ತನ್ನ ಮನೆ ತಲುಪಿ ಪ್ರಜ್ಞೆ ಕಳೆದುಕೊಳ್ಳುವ ಮೊದಲು ತನ್ನ ದಾರುಣ ಸ್ಥಿತಿಯನ್ನು ಹೆತ್ತವರಿಗೆ ವಿವರಿಸಿದಳು. ಒಡನೆಯೇ ಅವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಆಕೆಯ ಗಂಭೀರ ಪರಿಸ್ಥಿತಿಯನ್ನು ಲಕ್ಕಿಸಿ ಆಕೆಯನ್ನು ಅನಂತರ ಬಿಲಾಸ್ಪುರ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಎಸ್ಎಚ್ಓ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ