ಆಭರಣದ ಶೋ ರೂಂ ನಲ್ಲಿ ಮಹಿಳೆಯರಿಬ್ಬರಿಂದ ಚಿನ್ನ ಕಳ್ಳತನ
Team Udayavani, Mar 21, 2021, 3:10 PM IST
ನವದೆಹಲಿ: ಮಹಿಳೆಯರಿಬ್ಬರು ಗ್ರಾಹಕರ ರೂಪದಲ್ಲಿ ತಾನೀಶ್ಕ್ ಟೈಟಾನ್ಸ್ ಚಿನ್ನದ ಶೋ ರೂಂ ಗೆ ಆಗಮಿಸಿ ಬರೋಬ್ಬರಿ 18.3 ಗ್ರಾಂ. ತೂಕ ಹೊಂದಿರುವ ಸುಮಾರು 2. 10 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳ್ಳತನ ಮಾಡಿರುವ ಘಟನೆ ಚಂಡಿಗಡದಲ್ಲಿ ನಡೆದಿದೆ.
ಈ ಕಳ್ಳತನ ಪ್ರಕ್ರಿಯೆ ಕೇವಲ 6 ನಿಮಿಷಗಳಲ್ಲಿ ನಡೆದಿದ್ದು, ಈ ಕುರಿತಾದ ದೃಶ್ಯಾವಳಿಗಳು ಶೋ ರೂಂ ನ CCTV ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.
ಘಟನೆ ನಡೆದ ಒಂದು ದಿನದ ನಂತರ ಈ ವಿಚಾರ ಆಭರಣ ಶೋ ರೂಂ ನ ಮ್ಯಾನೇಜರ್ ಮಿಲಿಂದ್ ಮಲ್ಹೋತ್ರಾ ಅವರ ಗಮನಕ್ಕೆ ಬಂದಿದ್ದು, ಮಣಿ ಮಜ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದಾದ ಬಳಿಕ CCTV ದೃಶ್ಯಾವಳಿಗಳನ್ನು ಸುತ್ತಮುತ್ತಲಿನ ಆಭರಣ ಶೋ ರೂಂಗಳು ಹಾಗೂ ಪೊಲೀಸ್ ಠಾಣೆಗಳಿಗೆ ನೀಡಲಾಗಿದ್ದು, ಘಟನೆಯ ಕುರಿತಾದ ಮಾಹಿತಿಗಳನ್ನೂ ಕೂಡಾ ಇತರೆ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಗಳ ಫನ್ನಿ ಮ್ಯಾಜಿಕ್ ನೋಡಿ ಬಕ್ರಾ ಆದ ಅಪ್ಪ : ವಿಡಿಯೋ ನೋಡಿ
CCTV ಯಲ್ಲಿರುವ ದೃಶ್ಯಾವಳಿಗಳ ಮಾಹಿತಿ ಅನ್ವಯ ಆರೋಪಿತ ಮಹಿಳೆಯರು ಸರಳ ಉಡುಪುಗಳನ್ನು ಧರಿಸಿದ್ದು, ಶೋ ರೂಂ ಒಳಗೆ ಆಗಮಿಸಿ ಚಿನ್ನದ ಸರಗಳನ್ನು ತೋರಿಸುವಂತೆ ಕೇಳಿದ್ದಾರೆ. ನಂತರ ಸೇಲ್ಸ್ ಮನ್ ಚಿನ್ನದ ಸರಗಳನ್ನು ತೋರಿಸುವಾಗ, ಬೇರೆ ವಿನ್ಯಾಸದ ಚಿನ್ನದ ಸರಗಳನ್ನು ತೋರಿಸಲು ತಿಳಿಸಿದ್ದಾರೆ. ಸೇಲ್ಸ್ ಮನ್ ಬೇರೆ ವಿನ್ಯಾಸದ ಸರಗಳನ್ನು ತೋರಿಸಲು ಹೋದಾಗ ಆತನಿಗೆ ತಿಳಿಯದಂತೆ ಸರವನ್ನು ಕಳ್ಳತನ ಮಾಡಲಾಗಿದೆ.
ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಮಣಿ ಮಜ್ರಾದ ಪೊಲೀಸ್ ಅಧಿಕಾರಿ ನೀರಜ್ ಸಾರ್ನಾ ಘಟನೆಗೆ ಸಂಬಂಧಿಸಿರುವ ಮಹಿಳೆಯರನ್ನು ಆದಷ್ಟು ಬೇಗ ಬಂಧಿಸಲಾಗುವುದು, ಈ ಹಿಂದೆಯೋ ಕೂಡಾ ಇಂತಹ ಪ್ರಕರಣ ಬೆಳಕಿಗೆ ಬಂದಿದ್ದು ಹಳೆಯ ಪ್ರಕರಣವನ್ನೂ ಕೂಡಾ ಅಧ್ಯಯನ ಮಾಡಲಾಗುತ್ತಿದೆ ಎಂದಿದ್ದು, ಈ ನಡುವೆ ಆಭರಣದ ಶೋ ರೂಂ ನಲ್ಲಿನ ಕೆಲಸಗಾರರಲ್ಲಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?