2 ಶತಮಾನ ಹಿಂದೆಯೇ ಬಾಲಾಕೋಟ್ನಲ್ಲಿತ್ತು ಜಿಹಾದ್ ಪಾತಕತನ
Team Udayavani, Feb 28, 2019, 12:30 AM IST
ಪಾಕಿಸ್ತಾನದ ಬಾಲಕೋಟ್ನಲ್ಲಿ ಉಗ್ರ ಚಟುವಟಿಕೆ ಈಗ ಆರಂಭವಾಗಿದ್ದಲ್ಲ. ಬದಲಿಗೆ ಇದು ಶುರುವಾಗಿದ್ದು 1800ರಲ್ಲಿ! ಉತ್ತರ ಪ್ರದೇಶದ ರಾಯ್ ಬರೇಲಿ ಮೂಲದ ಸೈಯದ್ ಅಹಮದ್ ಬರೇಲ್ವಿ ಬಾಲಕೋಟ್ನಲ್ಲಿ ಉಗ್ರರ ನೆಲೆಯನ್ನು ಸ್ಥಾಪಿಸಿದ್ದ. ಈ ಭಾಗದಲ್ಲಿ ಇಸ್ಲಾಂ ಆಡಳಿತ ನಡೆಯಬೇಕು ಎಂದು ಈತ ಭಾವಿಸಿದ್ದ. ಭಾರತದಲ್ಲಿ ಮರಾಠರು, ಸಿಖ್ಭರು ಮತ್ತು ಜಾಠರ ಪ್ರಾಬಲ್ಯದ ಮಧ್ಯೆ ಮುಸ್ಲಿಮರ ಪ್ರಾಬಲ್ಯ ಕಡಿಮೆಯಾಗುತ್ತಿದೆ ಎಂದು ಚಿಂತೆಗೀಡಾಗಿದ್ದ. ಇದೇ ಕಾರಣಕ್ಕೆ ಈತ ಈಗಿನ ಖೈಬರ್ ಪಖು¤ಂಖಾ¤$Ìಗೆ ಆತ ಪ್ರಯಾಣಿಸಿದ್ದ. ಈ ಭಾಗದಲ್ಲಿ ಅದಾಗಲೇ ಮಹಾರಾಜರ ಆಡಳಿತವಿತ್ತು. ಅಲ್ಲಿನ ಮುಸ್ಲಿಮರು ರಾಜನ ಬಗ್ಗೆ ಅಸಮಾಧಾನವನ್ನು ಹೊಂದಿದ್ದರಿಂದ, ಸುಮಾರು 2500 ಯೋಧರನ್ನು ಈತ ಕರೆದುಕೊಂಡು ಅಲ್ಲಿಗೆ ಹೊರಟಿದ್ದ.
ಹಾಗೆಂದು ಆತ ನೇರವಾಗಿ ಬಾಲಕೋಟ್ಗೆ ದಾಳಿ ಮಾಡಿರಲಿಲ್ಲ. ಬದಲಿಗೆ ಸುಮಾರು ಐದು ವರ್ಷಗಳನ್ನು ತೆಗೆದುಕೊಂಡು ಆತ ಅಲ್ಲಿಗೆ 1831ರ ವೇಳೆಗೆ ತೆರಳಿದ್ದ. ಆದರೆ ಆಗ ಕಾಶ್ಮೀರದ ಗವರ್ನರ್ ಆಗಿದ್ದ ಹರಿ ಸಿಂಗ್, ಬಾಲಕೋಟ್ಗೆ ಬಂದಿದ್ದ ಬರೇಲ್ವಿಯ ವಿರುದ್ಧ ಹೋರಾಟ ನಡೆಸಿದ್ದ. ಈತನ ಕೋಟೆ ಸುತ್ತಲೂ ಭತ್ತದ ಗದ್ದೆಗಳಿದ್ದವು. ಸಿಖ್ ಸೇನೆ ಆಗಮಿಸುತ್ತಿದ್ದಂತೆಯೇ ಬರೇಲ್ವಿ ಈ ಗದ್ದೆಗಳಿಗೆ ಸುತ್ತಲಿನ ಕೆರೆಗಳಿಂದ ನೀರು ಬಿಟ್ಟು, ಸೇನೆ ಕೋಟೆಗೆ ತಲುಪಲು ಸಾಧ್ಯವಾಗದಿರಲಿ ಅಂತ ಪ್ರಯತ್ನಿಸಿದ್ದ. ಆದರೆ ಬರೇಲ್ವಿಯ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಹರಿ ಸಿಂಗ್ಗೆ ಶೇರ್ ಸಿಂಗ್ ಎಂಬ ಕಮಾಂಡರ್ ಇದ್ದ. ಈತನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಬರೇಲ್ವಿಯ ಸುಮಾರು 1300 ಯೋಧರು ಸಾವನ್ನಪ್ಪಿದ್ದರು. ಬರೇಲ್ವಿ ಮತ್ತು ಆತನ ಸಂಬಂಧಿ ಶಾ ಇಸ್ಮಾಯಿಲ್ ಕೂಡ ಸಾವನ್ನಪ್ಪಿದ್ದರು. ಈತ ತನ್ನನ್ನು ಧಾರ್ಮಿಕ ಮುಖಂಡ ಎಂದು ಕರೆದುಕೊಂಡಿದ್ದ. ಈಗಿನ ಭಯೋತ್ಪಾದಕರು ಇಂದಿಗೂ ಈತನ ಬೋಧನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಈಗ ಅಲ್ಲಿ ಲಷ್ಕರ್- ಎ-ತೊಯ್ಬಾ ಹಾಗೂ ಇತರ ಉಗ್ರರ ನೆಲೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು