2007 ಹೈದರಾಬಾದ್ ಅವಳಿ ಬ್ಲಾಸ್ಟ್; ಇಬ್ಬರು ದೋಷಿ, ಇಬ್ಬರ ಖುಲಾಸೆ
Team Udayavani, Sep 4, 2018, 12:00 PM IST
ಹೈದರಾಬಾದ್ : 2007ರಲ್ಲಿ ನಡೆದಿದ್ದ ಹೈದರಾಬಾದ್ ಅವಳಿ ಬ್ಲಾಸ್ಟ್ ಕೇಸಿನಲ್ಲಿ ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರೆಂದು ತಿಳಿಯಲಾಗಿರುವ ಅನೀಕ್ ಶಫೀಕ್ ಸಯೀದ್ ಮತ್ತು ಇಸ್ಮಾಯಿಲ್ ಚೌಧರಿ ಅವರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಅಪರಾಧಿಗಳೆಂದರೆ ಘೋಷಿಸಿದ್ದು ಸೆ.10ರ ಸೋಮವಾರದಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಈ ಪ್ರಕರಣದ ಇನ್ನೂ ಇಬ್ಬರು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆ ಮಾಡಿದೆ. ಇವರಲ್ಲದೆ ಇನ್ನೂ ಮೂವರು ಆರೋಪಿಗಳು ಈಗಲೂ ತಲೆ ಮರೆಸಿಕೊಂಡಿದ್ದಾರೆ.
11 ವರ್ಷಗಳ ಹಿಂದೆ ಹೈದರಾಬಾದಿನ ಗೋಕುಲ್ ಚ್ಯಾಟ್ ಮತ್ತು ಲುಂಬಿನಿ ಪಾರ್ಕ್ನಲ್ಲಿ ಅವಳಿ ಬಾಂಬ್ ಸ್ಫೋಟ ನಡೆದಿತ್ತು. 42 ಜನರು ಮೃತಪಟ್ಟಿದ್ದರು; 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಕೇಸಿಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಅವರೆಂದರೆ ಮೊಹಮ್ಮದ್ ಸಾದಿಕ್, ಅನ್ಸಾರ್ ಅಹ್ಮದ್ ಬಾದ್ಶಾ ಶೇಕ್, ಅಕ್ಬರ್ ಇಸ್ಮಾಯಿಲ್ ಮತ್ತು ಅನೀಕ್ ಶಫೀಕ್ ಸೈಯದ್.
ಈ ಎಲ್ಲ ಬಂಧಿತರು ಇಂಡಿಯನ್ ಮುಜಾಹಿದೀನ್ ಕಾರ್ಯಕರ್ತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್