ದೇಶದಲ್ಲಿ 22 ಎಕ್ಸ್ಪ್ರೆಸ್ ಹೆದ್ದಾರಿ ; ವಿಶೇಷ ಉದ್ದೇಶಿತ ಘಟಕ ಮೂಲಕ ಅನುಷ್ಠಾನ
ಮೊದಲ ಹಂತದಲ್ಲಿ ದೆಹಲಿ-ಮುಂಬಯಿ ನಡುವೆ ಎಕ್ಸ್ಪ್ರೆಸ್ ವೇ ನಿರ್ಮಾಣ
Team Udayavani, Aug 12, 2020, 11:23 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ರಸ್ತೆ ಜಾಲ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) 3.3 ಲಕ್ಷ ಕೋಟಿ ರೂ. ವೆಚ್ಚದಲ್ಲಿ 22 ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲು ನಿರ್ಧರಿಸಿದೆ. ಯೋಜನೆಗಳಿಗೆ ವಿತ್ತೀಯ ನೆರವು ಪಡೆಯಲು ಸುಲಭವಾಗುವ ನಿಟ್ಟಿನಲ್ಲಿ ಪ್ರತ್ಯೇಕವಾಗಿರುವ ವಿಶೇಷ ಉದ್ದೇಶಿತ ಘಟಕ (ಎಸ್ಪಿವಿ) ರಚಿಸಲು ನಿರ್ಧರಿಸಿದೆ.
ಈ ಚಿಂತನೆಯ ಅನ್ವಯ ದೆಹಲಿ- ಮುಂಬಯಿ ನಡುವೆ ನಿರ್ಮಿಸಲು ಉದ್ದೇಶಿಸಲಾಗಿರುವ ಹೆದ್ದಾರಿ ಯೋಜನೆಯಿಂದಲೇ ಜಾರಿಗೆ ನಿರ್ಧರಿಸಲಾಗಿದೆ. 45 ಸಾವಿರ ಕೋಟಿ ರೂ. ಮೊತ್ತದ ಯೋಜನೆಯಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಪ್ರಾಧಿಕಾರವೇ ಹೂಡಿಕೆ ಮಾಡಲಿದೆ. ಉಳಿದ 40 ಸಾವಿರ ಕೋಟಿ ರೂ. ಮೊತ್ತವನ್ನು ಮಾರುಕಟ್ಟೆಯಿಂದ ಸಾಲದ ರೂಪದಲ್ಲಿ ಪಡೆದುಕೊಳ್ಳಲು ಉದ್ದೇಶಿಸಿದೆ. ಎಸ್ಪಿವಿಯ ನೇತೃತ್ವವನ್ನು ಎನ್ಎಚ್ಎಐ ವಹಿಸಿಕೊಳ್ಳಲಿದೆ. ಎನ್ಎಚ್ಎಐ ಸರಕಾರಿ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಅದರ ನೇತೃತ್ವದಲ್ಲಿ ರಚನೆಯಾಗುವ ವಾಹಕಕ್ಕೆ ರಾಷ್ಟ್ರೀಕೃತ ಬ್ಯಾಂಕ್, ಪಿಂಚಣಿ ನಿಧಿ, ವಿಮೆ ಕಂಪೆನಿ, ವಿದೇಶಿ ಹೂಡಿಕೆದಾರರಿಂದ ಸುಲಭವಾಗಿ ಸಾಲ ಪಡೆಯಲು ಅನುಕೂಲವಾಗಲಿದೆ.
ಎರಡು ರೀತಿಯ ಎಸ್ಪಿವಿಗಳನ್ನು ಅದು ರಚಿಸಲು ಉದ್ದೇಶಿಸಿದೆ. 300-400 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ದೂರದ ಹೆದ್ದಾರಿ ಯೋಜನೆಗಳಿದ್ದರೆ ಪ್ರತ್ಯೇಕ ಘಟಕಗಳನ್ನು ರಚಿಸಲು ಉದ್ದೇಶಿಸಿದೆ ಪ್ರಾಧಿಕಾರ. ಸಣ್ಣ ಯೋಜನೆಯಾದರೆ ಒಂದೇ ಎಸ್ಪಿವಿ ವ್ಯಾಪ್ತಿಗೆ ತರಲು ಪ್ರಾಧಿಕಾರ ಯೋಜನೆ ರೂಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ