ಮನೆಯವರ ಇಚ್ಛೆಗೆ ವಿರುದ್ಧ ಲವ್ ಅಫೇರ್ : ಪುತ್ರಿಯ ಕೊಂದ ತಂದೆ, ಸಹೋದರ
Team Udayavani, Mar 26, 2019, 12:25 PM IST
ಮುಜಫರನಗರ, ಉತ್ತರ ಪ್ರದೇಶ : ಮನೆಯವರ ಇಚ್ಛೆಗೆ ವಿರುದ್ಧವಾಗಿ ಹುಡುಗನೊಬ್ಬನನ್ನು ಪ್ರೀತಿಸಿದ 23ರ ಹರೆಯದ ಮಹಿಳೆಯನ್ನು ಆಕೆಯ ತಂದೆ ಮತ್ತು ಸಹೋದರ, ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಂದ ಅಮಾನುಷ ಘಟನೆ ನಡೆದಿರುವುದಾಗಿ ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ.
ಕಳೆದ ಮಾರ್ಚ್ 23ರಂದು ಹೊಲದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಇದನ್ನು ಅನುಸರಿಸಿ ಆಕೆಯ ಮನೆಯವರು ಶಾಮಿಲಿ ಜಿಲ್ಲೆಯ ತನಭವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಲೆ ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯ ತಂದೆ ಮತ್ತು ಸಹೋದರನೇ ಕೂಡಿಕೊಂಡು ಮನೆಯ ಮರ್ಯಾದೆ ಉಳಿಸುವುದಕ್ಕಾಗಿ ಆಕೆಯನ್ನು ಕೊಂದಿರುವುದು ಗೊತ್ತಾಯಿತು; ಪೊಲೀಸರ ದಾರಿ ತಪ್ಪಿಸಲು ಮನೆಯವರೇ ಪೊಲೀಸರಿಗೆ ದೂರು ನೀಡಿದ್ದರು ಎಂದು ಪೊಲೀಸ್ ಸುಪರಿಂಟೆಂಡೆಂಟ್ ಅಜಯ್ ಕುಮಾರ್ ಪಾಂಡೆ ತಿಳಿಸಿದರು.