ಗಾಂಧೀಜಿಗೆ 3 ಬಾರಿ ಮಲೇರಿಯಾ!

ಗಾಂಧಿ ಆ್ಯಂಡ್‌ ಹೆಲ್ತ್‌ ಅಟ್‌ 150 ಕೃತಿಯಲ್ಲಿ ಬಹಿರಂಗಗೊಂಡ ವಿವರ

Team Udayavani, Mar 26, 2019, 6:00 AM IST

q-34

ಹೊಸದಿಲ್ಲಿ: “ಬದುಕಿದರೆ ಗಾಂಧಿಯಂತೆ ಬದುಕಬೇಕು’ ಎಂಬುದು ಭಾರತವೇಕೆ ಜಗತ್ತಿನಲ್ಲೇ ಬಹುದೊಡ್ಡವರು ಎನಿಸಿಕೊಂಡವರ ಮಾತು… ಆದರೆ ಅದೇ ಗಾಂಧೀಜಿ ಹೇಗೆ ಬದುಕಿದ್ದರು, ಅವರ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ಬಗ್ಗೆ ಇದುವರೆಗೂ ಬಹಳಷ್ಟು ಕೌತುಕಗಳಿದ್ದವು. ಇದೇ ಮೊದಲ ಬಾರಿಗೆ ಗಾಂಧಿ ಅವರ ಆರೋಗ್ಯ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಈ ದಾಖಲೆಗಳನ್ನು “ಗಾಂಧಿ ಆ್ಯಂಡ್‌ ಹೆಲ್ತ್‌ ಅಟ್‌ 150′ ಪುಸ್ತಕದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್‌ (ಐಸಿಎಂಆರ್‌) ಬಿಡುಗಡೆಗೊಳಿಸಿದೆ.

ಈ ದಾಖಲೆಗಳ ಪ್ರಕಾರ, ಗಾಂಧೀಜಿ ಅವರು ತಮ್ಮ ಜೀವನದಲ್ಲಿ ಮೂರು ಬಾರಿ ಮಲೇರಿಯಾಗೆ ತುತ್ತಾಗಿದ್ದರಂತೆ. 1925, 1936 ಮತ್ತು 1944ರಲ್ಲಿ ಮಲೇರಿಯಾದಿಂದ ಬಳಲಿದ್ದರು. ಅಷ್ಟೇ ಅಲ್ಲ, 1919ರಲ್ಲಿ ಪೈಲ್ಸ್‌ ಮತ್ತು 1924ರಲ್ಲಿ ಅಪೆಂಡಿಸೈಟಿಸ್‌ ಕೂಡ ಕಾಣಿಸಿಕೊಂಡಿತ್ತು ಎಂದು ಇದೇ ದಾಖಲೆಗಳು ಹೇಳುತ್ತಿವೆ.

ಗಾಂಧೀಜಿ ಅವರು, ಹಲವು ಕಾಲದ ವರೆಗೆ ಅನಾರೋಗ್ಯ ದಿಂದ ಬಳಲಿದ್ದರು ಮತ್ತು ದೀರ್ಘ‌ಕಾಲದವರೆಗೆ ರಕ್ತ ದೊತ್ತಡದಿಂದ ಬಳಲುತ್ತಿದ್ದರು ಎಂಬುದು ತಿಳಿದುಬಂದಿದೆ. ಆದರೂ ಅವರು ತಮ್ಮ ಜೀವನವನ್ನು ಒಂದು ಆದರ್ಶದಂತೆ ಬದುಕಿದರು. ಅಷ್ಟೇ ಅಲ್ಲ, ಪಾರ್ಶ್ವವಾಯು ಪೀಡಿತರ ಚಿಕಿತ್ಸೆಗೆ ತಮ್ಮ ಜೀವನವನ್ನು ಮುಡುಪಿಟ್ಟರು.

ದಿಲ್ಲಿಯ ಮಹಾತ್ಮಾ ಗಾಂಧಿ ಮ್ಯೂಸಿಯಂನಲ್ಲಿ ಸಂರಕ್ಷಿಸಿದ ಹಲವು ಆರೋಗ್ಯ ದಾಖಲೆಗಳನ್ನು ಇದೇ ಮೊದಲ ಬಾರಿಗೆ ಗಾಂಧಿ ಆ್ಯಂಡ್‌ ಹೆಲ್ತ್‌ ಅಟ್‌ 150 ಪುಸ್ತಕದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನೆ ಕೌನ್ಸಿಲ್‌ ಬಿಡುಗಡೆಗೊಳಿಸಿದೆ.

ಮಾ. 20ರಂದು ಧರ್ಮಶಾಲಾದಲ್ಲಿ ದಲಾಯಿ ಲಾಮಾ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. 1939ರಲ್ಲಿ ದಾಖಲಾದಂತೆ ಗಾಂಧಿ 46.7 ಕಿಲೋ ತೂಕ ಇದ್ದರು. ಅವರು ಐದು ಅಡಿ ಐದು ಇಂಚು ಎತ್ತರವಿದ್ದರು. ಇವರನ್ನು ಪರೀಕ್ಷಿಸಿದ ವೈದ್ಯರು ವಯಸ್ಸಿಗೆ ಹೋಲಿಸಿದರೆ ಕಡಿಮೆ ತೂಕವಿದ್ದರು ಎಂದು ಷರಾ ಬರೆದಿದ್ದರು. ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ಸೂಚಿಸಿದ್ದರು.

ಲಂಡನ್‌ನಲ್ಲಿರುವಾಗ ಅವರಿಗೆ ಪಾರ್ಶ್ವಬಾವು ಕೂಡ ಕಾಣಿಸಿಕೊಂಡಿತ್ತು. ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅವರು ಪ್ರತಿ ದಿನ ಸಂಜೆ 8 ಮೈಲು ನಡೆಯುತ್ತಿದ್ದರು ಮತ್ತು ಮಲಗುವ ಮುನ್ನ 30-40 ನಿಮಿಷ ನಡೆಯುತ್ತಿದ್ದರು. 1937ರ ಅ. 26ರಂದು ತಪಾಸಣೆ ನಡೆಸಿದಾಗ ಅವರ ರಕ್ತದೊತ್ತಡ 194/130 ಹಾಗೂ 1940 ಫೆಬ್ರವರಿ 19 ರಂದು ಅವರ ರಕ್ತದೊತ್ತಡ 220/110 ಇತ್ತು ಎಂದು ಕೃತಿಯಲ್ಲಿ ವಿವರಿಸಲಾಗಿದೆ.

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.