ನೋಯ್ಡಾದಲ್ಲಿ ಬಂದೂಕು ತೋರಿಸಿ ನಾಲ್ವರಿಂದ ಕಾರು ಅಪಹರಣ
Team Udayavani, Nov 30, 2017, 12:22 PM IST
ನೋಯ್ಡಾ : ನಾಲ್ವರು ಬಂದೂಕುಧಾರಿಗಳು ಲಕ್ನೋ ಮೂಲದ ಹೊಟೇಲ್ ಮಾಲಕನ ಕಾರು ಚಾಲಕನಿಗೆ ಬಂದೂಕು ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ಕಾರನ್ನು ಒಯ್ದ ಘಟನೆ ನೋಯ್ಡಾದಿಂದ ವರದಿಯಾಗಿದೆ.
ನಿನ್ನೆ ಬುಧವಾರ ರಾತ್ರಿ ಬಂದೂಕುಧಾರಿಗಳು ಗನ್ ಪಾಯಿಂಟ್ನಿಂದ ಕಾರು ಚಾಲಕನನ್ನು ಹೊರಗೆಳೆದು ಒದ್ದು ಕಾರನ್ನು ಚಲಾಯಿಸಿಕೊಂಡು ಪರಾರಿಯಾದರು ಎಂದು ಸೆಕ್ಟರ್ 20ರ ಪೊಲೀಸ್ ಠಾಣಾಧಿಕಾರಿ ಅನಿಲ್ ಕುಮಾರ್ ಶಾಹಿ ತಿಳಿಸಿದ್ದಾರೆ.
ಬಂದೂಕು ಧಾರಿಗಳು ಅಪಹರಿಸಿರುವ ಹೋಂಡಾ ಸಿಟಿ ಕಾರು ಲಕ್ನೋ ನಿವಾಸಿ, ಹೊಟೇಲ್ ಮಾಲಕ ಸಂದೀಪ್ ಅಹೂಜಾ ಎಂಬವರಿಗೆ ಸೇರಿದ್ದು ಎಂದು ಕಾರು ಚಾಲಕನು ತಿಳಿಸಿರುವುದಾಗಿ ಶಾಹಿ ಹೇಳಿದರು.
ಕಾರು ಚಾಲಕನು ಅಹುಜಾ ಕುಟುಂಬವನ್ನು ನಿನ್ನೆ ಬುಧವಾರ ರಾತ್ರಿ ನೋಯ್ಡಾದ ಡಿಎಲ್ಎಫ್ ಮಾಲ್ನಲ್ಲಿ ಇಳಿಸಿ ಅವರು ಮದುವೆ ಕಾರ್ಯಕ್ರಮ ಮುಗಿಸಿ ಬರುವುದನ್ನು ಕಾಯುತ್ತಿದ್ದ ನಿಂತುಕಂಡಿದ್ದ ಈ ಬಲವಂತದ ಅಪಹರಣ ನಡೆಯಿತು. ಕಾರು ಚಾಲಕನು ಅಹುಜಾ ಅವರಲ್ಲಿ ಕಳೆದ ಹತ್ತು ವರ್ಷಗಳಿಂದ ದುಡಿಯುತ್ತಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ