ವಿಷಾಹಾರ ಸೇವನೆಯಿಂದ 400 ಸಿಆರ್ಪಿಎಫ್ ಯೋಧರು ಅಸ್ವಸ್ಥ
Team Udayavani, Apr 2, 2017, 1:26 PM IST
ತಿರುವನಂತಪುರಂ: ಕೇರಳದ ಪಲ್ಲಿಪುರಂನ ಸಿಆರ್ಪಿಎಫ್ ಕ್ಯಾಂಪ್ನಲ್ಲಿ ವಿಷಾಹಾರ ಸೇವನೆಯಿಂದ 400 ಮಂದಿ ಯೋಧರು ಅಸ್ವಸ್ಥಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ರಾತ್ರಿ ಆಹಾರ ಸೇವಿಸುತ್ತಿದ್ದಂತೆ ಹೆಚ್ಚಿನ ಯೋಧರು ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲಿದ್ದಾರೆ. ಕೂಡಲೇ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ತಿರುವನಂತಪುರಂ ನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 109 ಯೋಧರಿಗೆ ಚಿಕಿತ್ಸೆ ಮುಂದುವರೆದಿದ್ದು, ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಯೋಧರು ಸೇವಿಸಿದ ಆಹಾರದ ಸ್ಯಾಂಪಲ್ ಪಡೆದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎಲ್ಲಾ ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.