ದಲಿತ ಮಹಿಳೆ ಮತ್ತು ಮನೆಯವರ ಮೇಲೆ ಹಲ್ಲೆ: 6 ಮಂದಿ ಸೆರೆ
Team Udayavani, Feb 5, 2018, 12:01 PM IST
ಮುಜಫರನಗರ : ದಲಿತ ಮಹಿಳೆಗೆ ಕಿರುಕುಳ ನೀಡಿ ಆಕೆಯ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬುವಾಡಾ ಗ್ರಾಮದಲ್ಲಿ ದಲಿತ ಮಹಿಳೆ ಮತ್ತು ಆಕೆಯ ಕುಟುಂಬದ ನಾಲ್ವರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳಾದ ಪವನ್, ಅರವಿಂದ್, ದಿನೇಶ್, ರಾಜೇಶ್ ಮತ್ತು ರಾಕೇಶ್ ಎಂಬವರನ್ನುನ ಬಂಧಿಸಿದರು.
ದಲಿತ ಮಹಿಳೆ ನೀಡಿದ್ದ ದೂರಿನ ಪ್ರಕಾರ ಇಲ್ಲಿನ ಖಟೋಲಿ ಪೊಲೀಸ್ ಠಾಣಾಧಿಕಾರಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.