ಗಡಿ ಕಣ್ಗಾವಲಿಗೂ ಬರಲಿದೆ ಏರ್ ಇಂಡಿಯಾ!
Team Udayavani, Dec 17, 2020, 6:16 AM IST
6 ವಿಮಾನಗಳಿಗೆ “ಎಇಡಬ್ಲ್ಯು ಆ್ಯಂಡ್ ಸಿ’ ಅಳವಡಿಕೆ
ಡಿಆರ್ಡಿಒದಿಂದ ಅಗತ್ಯ ಮಾರ್ಪಾಡು, ರಾಡಾರ್ ಅಳವಡಿಕೆ
ಗಡಿಗಳಲ್ಲಿ ಕಣ್ಗಾವಲು ಹೊಣೆ
ಹೊಸದಿಲ್ಲಿ: ಇಷ್ಟು ದಿನ ಏರ್ಇಂಡಿಯಾ ವಿಮಾನಗಳು ಪ್ರಯಾಣಿಕರ ಸಾಗಾಟಕ್ಕಷ್ಟೇ ಸೀಮಿತವಾಗಿದ್ದವು. ಡಿಆರ್ಡಿಒ ತಾಂತ್ರಿಕ ಸ್ಪರ್ಶದಿಂದ ಈ ವಿಮಾನಗಳಿನ್ನು ಗಡಿ ಆಗಸದಲ್ಲೂ ಕಣ್ಗಾವಲು ವಿಮಾನಗಳಾಗಿ ಹಾರಾಟ ನಡೆಸಲಿವೆ!
ಹೌದು, ಭಾರತೀಯ ವಾಯುಪಡೆ 6 ವಾಯುಗಾಮಿ ಮುನ್ಸೂಚಕ ಮತ್ತು ನಿಯಂತ್ರಣ (ಎಇಡಬ್ಲ್ಯು ಆ್ಯಂಡ್ ಸಿ) ವಿಮಾನಗಳನ್ನು ಪಾಕಿಸ್ತಾನ ಮತ್ತು ಚೀನದ ಗಡಿಗೆ ನಿಯೋಜಿಸಲು ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ಪ್ರತ್ಯೇಕ ವಿಮಾನಗಳನ್ನು ನಿರ್ಮಿಸದೆ, ಏರ್ಇಂಡಿಯಾದ ಪ್ಯಾಸೆಂಜರ್ ವಿಮಾನಗಳಿಗೇ “ಎಇಡಬ್ಲ್ಯು ಆ್ಯಂಡ್ ಸಿ’ ತಂತ್ರಜ್ಞಾನ ಅಳವಡಿಸಲು ತೀರ್ಮಾನಿಸಿದೆ. 10,500 ಕೋ. ರೂ. ವೆಚ್ಚದಲ್ಲಿ “ಎಇಡಬ್ಲ್ಯು ಆ್ಯಂಡ್ ಸಿ’ ಬ್ಲಾಕ್-2 ಏರ್ಕ್ರಾಫ್ಟ್ಗಳನ್ನು ಅಭಿವೃದ್ಧಿಪಡಿಸಲು ಡಿಆರ್ಡಿಒಗೆ ಸೂಚಿಸಲಾಗಿದೆ.
ಮಾರ್ಪಾಡು ಹೇಗಿರಲಿದೆ?: ಸುಧಾರಿತ ಏರ್ಇಂಡಿಯಾ ವಿಮಾನಗಳನ್ನು ಯುದ್ಧವಿಮಾನ ಮಾದರಿಗೆ ಬದಲಿಸಲಾಗುತ್ತದೆ. ಇವುಗಳ ಮೇಲ್ಭಾಗದಲ್ಲಿ 360 ಡಿಗ್ರಿ ಕಣ್ಗಾವಲು ಸಾಮರ್ಥ್ಯವುಳ್ಳ ರಾಡಾರ್ಗಳನ್ನು ಅಳವಡಿಸಲಾಗುತ್ತದೆ. ಸ್ಥಾಪಿತ ರಾಡಾರ್ಗಳಷ್ಟೇ ವಿಮಾನಗಳ ಮುಖೇನ ಚಲಿಸುವ ಈ ರಾಡಾರ್ಗಳೂ ನಿರ್ಣಾಯಕ ಪಾತ್ರ ವಹಿಸಲಿವೆ.
“ನೇತ್ರಾ’ಗಿಂತ ಸಮರ್ಥ: “ಈಗಿರುವ ನೇತ್ರಾ ಕಣ್ಗಾವಲು ವಿಮಾನಗಳಿಂತ 6 “ಎಇಡಬ್ಲ್ಯು ಆ್ಯಂಡ್ ಸಿ’ ಏರ್ಕ್ರಾಫ್ಟ್ಗಳು ಸುಧಾರಿತ ತಂತ್ರಜ್ಞಾನ ಹೊಂದಿರಲಿವೆ. ಶತ್ರು ಪ್ರದೇಶದ ಒಳಭಾಗದ ದಾಳಿಯ ಮುನ್ಸೂಚನೆಗಳನ್ನು ಸಮರ್ಥವಾಗಿ ಪತ್ತೆಹಚ್ಚಲಿವೆ’ ಎಂದು ಮೂಲಗಳು ತಿಳಿಸಿವೆ.
ಮಾರ್ಪಾಡಿನ ಬಳಿಕ ಯುರೋಪ್ಗೆ!
ಏರ್ಇಂಡಿಯಾದ 6 ವಿಮಾನಗಳ ಅಗತ್ಯ ಮಾರ್ಪಾಡಿನ ಅನಂತರ ಇವುಗಳನ್ನು ಯುರೋಪ್ನ ಪ್ರಮುಖ ರಾಡಾರ್ ವಿಮಾನಗಳ ಮೂಲ ಉಪಕರಣ ತಯಾರಕ ಸಂಸ್ಥೆಯೊಂದಕ್ಕೆ ಕಳುಹಿಸಿಕೊಡಲಾಗುತ್ತದೆ. ರಾಡಾರ್ ಸ್ಥಾಪನೆಯ ಕಾರ್ಯ ಅಲ್ಲಿ ನಡೆಯಲಿದೆ.
ಚೀನಕ್ಕೆ ಟೆಲಿಕಾಂ ಶಾಕ್
ಲಡಾಖ್ ಬಿಕ್ಕಟ್ಟಿನ ಬೆನ್ನಲ್ಲೇ ಕೇಂದ್ರ ಸರಕಾರ, ಚೀನೀ ಟೆಲಿಕಾಂ ಸೇವೆ ಉತ್ಪನ್ನಗಳ ಸಂಸ್ಥೆಗೆ ಶಾಕ್ ನೀಡಿದೆ. ವಿಶ್ವಾಸಾರ್ಹ ಟೆಲಿಕಾಂ ಉತ್ಪನ್ನ ಮಾರಾಟಗಾರ ಸಂಸ್ಥೆಗಳ ಪಟ್ಟಿ ತಯಾರಿಸಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಭದ್ರತೆ ಕುರಿತಾದ ಸಂಸದೀಯ ಸಮಿತಿಯು ಟೆಲಿಕಮ್ಯೂ ನಿಕೇಷನ್ಸ್ ವಲಯದ ರಾಷ್ಟ್ರೀಯ ಭದ್ರತಾ ನಿರ್ದೇಶನ ವಿಭಾಗಕ್ಕೆ ಸೂಚನೆ ಹೊರಡಿಸಿದೆ. “ಟೆಲಿಕಾಂ ಸೇವಾ ಪೂರೈಕೆದಾರರ ಅನುಕೂಲಕ್ಕಾಗಿ ವಿಶ್ವಾಸಾರ್ಹ ಮೂಲಗಳ/ ಉತ್ಪನ್ನಗಳ ಪಟ್ಟಿಯನ್ನು ಸರಕಾರ ಘೋಷಿಸಲಿದೆ’ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!