ಭವ್ಯ ರಾಮ ಮಂದಿರ ಶೇ.60ರಷ್ಟು ಪೂರ್ಣ
2024ರ ಮಕರ ಸಂಕ್ರಾಂತಿ ಹಬ್ಬದಂದು ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪನೆ
Team Udayavani, Jan 14, 2023, 7:45 AM IST
ಅಯೋಧ್ಯೆ: ಉ. ಪ್ರದೇಶದ ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದೆ. 2024ರ ಮಕರ ಸಂಕ್ರಾಂತಿ ಹಬ್ಬದಂದು ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ “ದೇಗುಲದ ಮೊದಲ ಹಂತಸ್ತಿನ ನಿರ್ಮಾಣ ಕಾರ್ಯವು ಅಕ್ಟೋಬರ್ಗೆ ಪೂರ್ಣಗೊಳ್ಳಲಿದೆ. ದೇಗುಲದ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನ ವಿಗ್ರಹವನ್ನು 2024ರ ಮಕರ ಸಂಕ್ರಾಂತಿ ಹಬ್ಬದಂದು ಪ್ರತಿಷ್ಠಾಪಿಸಲಾಗುವುದು,’ ಎಂದು ವಿವರಿಸಿದರು.
ವಿಶೇಷತೆಗಳು:
ಗರ್ಭಗುಡಿ: 12 ಅಡಿ ಎತ್ತರದ ಪಾಯದ ಮೇಲೆ ಭವ್ಯವಾದ ಗರ್ಭಗುಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಎರಡು ವಿಗ್ರಹಗಳು:
ಪ್ರಭು ಶ್ರೀರಾಮನ ಎರಡು ವಿಗ್ರಹಗಳು ಇರಲಿದೆ. ದಶಕಗಳಿಂದ ಸ್ಥಾಪನೆಗೆ ಕಾಯುತ್ತಿರುವ ಮೂಲ ಶ್ರೀ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮತ್ತೊಂದು ಬೃಹತ್ ಶ್ರೀರಾಮನ ಪ್ರತಿಮೆಯನ್ನು ದೇಗುಲದ ಆವರಣದಲ್ಲಿ ಸ್ಥಾಪನೆಯಾಗಲಿದೆ. ಬಹುದೂರದಿಂದ ಈ ಪ್ರತಿಮೆ ಕಾಣಲಿದೆ.
3ಡಿ ಕೆತ್ತನೆ:
ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಕಥೆಗಳನ್ನು ದೇವಾಲಯದ ಕೆಳ ಹಂತಸ್ತಿನ ಸ್ತಂಭಗಳಲ್ಲಿ 3ಡಿ ಯಲ್ಲಿ ಕೆತ್ತಲಾಗುತ್ತದೆ. ಇವು ಉಜ್ಜಯಿನಿಯ ಮಹಾಕಾಲ ದೇಗುಲದ ಲೋಕ ಕಾರಿಡಾರ್ ಮಾದರಿಯಲ್ಲಿ ಇರಲಿದೆ.
ಮೂರ್ತಿಗಳ ಸ್ಥಾಪನೆ:
ದೇಗುಲದ ಆವರಣದಲ್ಲಿ ಸೀತಾ ಮಾತೆ, ಲಕ್ಷ್ಮಣ ಪ್ರಭು, ಭರತ, ಶತ್ರುಘ್ನ, ಸುಗ್ರೀವ, ಶಬರಿ, ಪ್ರಭು ಹನುಮಂತ ಸೇರಿದಂತೆ ರಾಮಾಯಣಕ್ಕೆ ಸಂಬಂಧಿಸಿದ ಪ್ರಮುಖರ ಮೂರ್ತಿಗಳು ಸ್ಥಾಪನೆಯಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ