ಬರಲಿದೆ ಸ್ವದೇಶಿ 6ಜಿ ತಂತ್ರಜ್ಞಾನ
2024ರ ಆರಂಭದಲ್ಲಿ ಜಾರಿಗೆ ಚಿಂತನೆ: ದೂರಸಂಪರ್ಕ ಸಚಿವ
Team Udayavani, Nov 25, 2021, 6:45 AM IST
ಹೊಸದಿಲ್ಲಿ: ಜಗತ್ತಿನ ದೂರಸಂಪರ್ಕ ಮಾರುಕಟ್ಟೆಯಲ್ಲಿ ದೇಶದ ಗುರುತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಅದನ್ನು 2023 ಅಥವಾ 2024ರ ಆರಂಭದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ವಿಜ್ಞಾನಿಗಳಿಗೆ ಮತ್ತು ಎಂಜಿನಿಯರ್ಗಳಿಗೆ ಅನುಮೋದನೆ ನೀಡಲಾಗಿದೆ. ಇಂಡಿಯಾ ಟೆಲಿಕಾಂ ಸಾಫ್ಟ್ ವೇರ್ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ವ್ಯವಸ್ಥೆಯಲ್ಲಿ ದೇಶೀಯವಾಗಿಯೇ ಸಿದ್ಧಗೊಳಿಸಲಾಗಿರುವ ದೂರ ಸಂಪರ್ಕ ಉಪಕರಣ, ತಂತ್ರಜ್ಞಾನ ಅಭಿವೃದ್ಧಿ ಗೊಳಿಸಲಾಗುತ್ತದೆ. ಜತೆಗೆ ಸ್ವದೇಶೀಯವಾಗಿ 5ಜಿ ಸ್ಪೆಕ್ಟ್ರಂ ಅಭಿವೃದ್ಧಿಪಡಿಸಲೂ ಪ್ರಯತ್ನ ನಡೆಸ ಲಾಗುತ್ತಿದೆ.
ಮುಂದಿನ ವರ್ಷದ 2ನೇ ತ್ತೈಮಾಸಿಕದಲ್ಲಿ 5 ಜಿ ಹರಾಜು ನಡೆಯಲಿದೆ ಎಂದೂ ತಿಳಿಸಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ನಡೆಸಿ, ದೂರಸಂಪರ್ಕ ಕಂಪೆನಿ ಗಳಿಗೆ ಸೂಕ್ತ ರೀತಿಯಲ್ಲಿ ಸ್ಪೆಕ್ಟ್ರಂ ಲಭ್ಯವಾಗುವಂತೆ ಮಾಡಲಾಗುವುದು.
ಇದನ್ನೂ ಓದಿ:ಕೋವಿಡ್ ಸೋಂಕು ಪರೀಕ್ಷೆ ಕಡಿಮೆಯಾಗಿದೆ; 13 ರಾಜ್ಯಗಳಿಗೆ ಕೇಂದ್ರದ ಮುನ್ನೆಚ್ಚರಿಕೆ
ವಿದ್ಯುತ್ ಮಾರಾಟವಾಗುವಂತೆ ಸ್ಪೆಕ್ಟ್ರಂ ಅನ್ನೂ ಕೂಡ ಅನುಕ್ಷಣದ ನೇರ ವಹಿವಾಟು (ರಿಯಲ್ ಟೈಮ್) ನಡೆಸಲೂ ಉದ್ದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
5ಜಿ
-6ಗಿಗಾ ಹರ್ಟ್ಜ್ ಗಿಂತ ಕೆಳಗೆ, ಗರಿಷ್ಠ 24.25 ಗಿ.ಹರ್ಟ್ ಗಿಂತ ಮೇಲೆ ಕಾರ್ಯ
-ಒಂದು ಸೆಕೆಂಡಿಗೆ 1ರಿಂದ 10 ಗಿಗಾಬೈಟ್ ದತ್ತಾಂಶ ಸಾಗಾಣಿಕೆ ಸಾಮರ್ಥ್ಯ.
-ಮೊಬೈಲ್ಗಳಿಗೆ ಒಂದು ಸೆಕೆಂಡಿನಲ್ಲಿ 100 ಎಂಬಿಪಿಎಸ್ ದತ್ತಾಂಶ ರವಾನೆ
-ದತ್ತಾಂಶ ರವಾನೆ, ಸ್ವೀಕಾರ ನಡುವಿನ ಸಮಯ: 1ರಿಂದ 5 ಮಿಲಿ ಸೆಕೆಂಡ್
6ಜಿ
-95ಗಿ. ಹರ್ಟ್ಜ್ ನಿಂದ 3 ಟೆರಾ ಹರ್ಟ್ಜ್ ವರೆಗೆ ಕಾರ್ಯನಿರ್ವಹಿಸಬಲ್ಲುದು.
-1 ಸೆಕೆಂಡಿಗೆ 1,000 ಗಿಗಾಬೈಟ್ನಷ್ಟು ದತ್ತಾಂಶ ವರ್ಗಾಯಿಸುವ ಸಾಮರ್ಥ್ಯ.
-ವಾಯುಮಂಡಲ-ಬಾಹ್ಯಾಕಾಶ-ನೆಲ-ಸಮುದ್ರದಲ್ಲಿ ಸಂಚರಿಸಬಲ್ಲ ಶಕ್ತಿಶಾಲಿ ತರಂಗಗಳು
-ದತ್ತಾಂಶ ರವಾನೆ, ಸ್ವೀಕಾರ ನಡುವಿನ ಸಮಯ:0.1 ಮಿಲಿ ಸೆಕೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ