ಟ್ರಕ್ ಡಿಕ್ಕಿ ಹೊಡೆದು ಉತ್ತರ ಪ್ರದೇಶದ 7 ಯಾತ್ರಿಕರು ಮೃತ್ಯು, ಹಲವರಿಗೆ ಗಾಯ
Team Udayavani, Apr 13, 2023, 8:36 PM IST
ಚಂಡೀಗಢ : ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಭಕ್ತರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಭಕ್ತರು ಮೃತಪಟ್ಟಿದ್ದು 20 ಭಕ್ತರು ಗಾಯಗೊಂಡಿರುವ ಘಟನೆ ಹೋಶಿಯಾರ್ಪುರ ಜಿಲ್ಲೆಯ ಗಢಶಂಕರ್ ವಿಭಾಗದ ಖುರಾಲ್ಗಢ ಸಾಹಿಬ್ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.
ಗಾಯಗೊಂಡ 20 ಮಂದಿಯಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ 14 ಮಂದಿಯನ್ನು ಗಢಶಂಕರ್ನಲ್ಲಿರುವ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬೈಸಾಕಿ ಹಬ್ಬದ ನಿಮಿತ್ತ ಕುರಾಲಗಢ ಸಾಹಿಬ್ನಲ್ಲಿನ ಗುರು ರವಿದಾಸರ ದರ್ಶನಕ್ಕಾಗಿ ಉತ್ತರಪ್ರದೇಶದ ಮುಜಫರ್ ನಗರದ ಭಕ್ತರ ತಂಡ ರಾಜಸ್ಥಾನಕ್ಕೆ ತೆರಳುತ್ತಿತ್ತು ಅದರಂತೆ ಗುರುವಾರ ಮುಂಜಾನೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಟ್ರಕ್ ಭಕ್ತರ ಗುಂಪಿನ ಮೇಲೆ ಹರಿದಿದೆ ಈ ಘಟನೆಯಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಪ್ರಮೋದ್ ಮಧ್ವರಾಜ್ ಅವರಿಗೆ ಖಂಡಿತ ಒಳ್ಳೆ ಭವಿಷ್ಯವಿದೆ: CM Bommai
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ