ಬಚಾವ್; ಟೆರೆಸ್ ನಿಂದ ಕಾಲುಜಾರಿ ಬಾತ್ ರೂಂನೊಳಗೆ ಬಿದ್ದ ಬಾಲಕಿ 5 ದಿನ ಬಂಧಿ!
Team Udayavani, Apr 27, 2019, 12:23 PM IST
ಹೈದರಾಬಾದ್: ಪಕ್ಕದ ಮನೆಯ ಟೆರೆಸ್ ಮೇಲೆ ಆಡವಾಡುತ್ತಿದ್ದ 7ವರ್ಷದ ಬಾಲಕಿಯೊಬ್ಬಳು ಆಯತಪ್ಪಿ ಬಾತ್ ರೂಂನೊಳಗೆ ಬಿದ್ದಿದ್ದಳು..ಸುಮಾರು 5 ದಿನಗಳ ಕಾಲ ಬಾತ್ ರೂಂನೊಳಗಿದ್ದು, ಬರೇ ನೀರು ಕುಡಿದುಕೊಂಡು ಬದುಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಏನಿದು ಘಟನೆ?
ಹೈದರಾಬಾದ್ ನಿಂದ 160 ಕಿಲೋ ಮೀಟರ್ ದೂರದಲ್ಲಿರುವ ತೆಲಂಗಾಣದ ನಾರಾಯಣ್ ಪೇಟ್ ಜಿಲ್ಲೆಯ ಮಾಕ್ಟಾಲ್ ನಗರದಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಕುರುವಾಕಾಚೇರಿ ಅಖಿಲಾ ತಮ್ಮ ನೆರ ಮನೆಯ ಟೆರೆಸ್ ಮೇಲೆ ಆಡವಾಡುತ್ತಿದ್ದ ವೇಳೆ ಆಯತಪ್ಪಿ ಬಾತ್ ರೂಂನೊಳಕ್ಕೆ ಬಿದ್ದಿದ್ದಳು. ಬಾತ್ ರೂಂ ಮೇಲೆ ಪ್ಲಾಸ್ಟಿಕ್ ಹಾಸಲಾಗಿತ್ತು. ಆಕೆ ಪ್ಲಾಸ್ಟಿಕ್ ಮೇಲೆ ಬಿದ್ದು, ಬಾತ್ ರೂಂನೊಳಗೆ ಜಾರಿದ್ದಳು.
ಈ ಘಟನೆ ನಡೆದದ್ದು ಏಪ್ರಿಲ್ 20ರಂದು. ಬಾತ್ ರೂಂ ಅನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಅಷ್ಟೇ ಅಲ್ಲ ಬಾತ್ ರೂಂ ದೂರವಿತ್ತು. ಮನೆಯ ಮಾಲೀಕರು ಕೂಡಾ ಪ್ರವಾಸ ಹೋಗಿದ್ದರು. ಈಕೆ ಸಹಾಯಕ್ಕಾಗಿ ಕೂಗಿಕೊಂಡರು ಕೂಡಾ ಯಾರಿಗೂ ಕೇಳಿಸದೇ ಇದ್ದ ಪರಿಣಾಮ ಐದು ದಿನಗಳ ಕಾಲ ಬಾತ್ ರೂಂನೊಳಗೆ ಕಾಲ ಕಳೆಯುವಂತಾಗಿತ್ತು!
ಮತ್ತೊಂದೆಡೆ ಮಗಳು ಮನೆಗೆ ಬಾರದಿರುವುದನ್ನು ಕಂಡು ತಂದೆ ಸುರೇಶ್, ತಾಯಿ ಮಹದೇವಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಶೋಧ ಕಾರ್ಯ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲವಾಗಿತ್ತು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಪೊಲೀಸರ ತಂಡವೊಂದನ್ನು ರಚಿಸಿ ತೆಲಂಗಾಣ ಮತ್ತು ಹೈದರಬಾದ್ ನಲ್ಲಿ ಶೋಧ ನಡೆಸಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲವಾಗಿತ್ತು. ಏತನ್ಮಧ್ಯೆ ಪ್ರವಾಸಕ್ಕೆ ಹೋಗಿದ್ದ ಮನೆಯ ಮಾಲೀಕ ವೆಂಕಟೇಶ್ ಬುಧವಾರ ವಾಪಸ್ ಬಂದಿದ್ದರು.
ಅವರು ಮನೆಯ ಹೊರಭಾಗದಲ್ಲಿದ್ದ ಬಾತ್ ರೂಂಗೆ ಹೋದಾಗ ಹುಡುಗಿಯೊಬ್ಬಳು ಬಿದ್ದಿರುವುದನ್ನು ಕಂಡು ಶಾಕ್ ಆಗಿದ್ದರು. ಕೂಡಲೇ ನೆರೆಮನೆಯವರಿಗೆಲ್ಲ ವಿಷಯ ತಿಳಿಸಿದ್ದರು. ಬಳಿಕ ಈ ಬಾಲಕಿಯ ಗುರುತು ಪತ್ತೆಹಚ್ಚಿದ್ದರು. ತಿಂಡಿ, ಊಟೋಪಚಾರವಿಲ್ಲದೆ ತೀವ್ರ ನಿತ್ರಾಣಗೊಂಡಿದ್ದ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಗೆ ಇನ್ನೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ