ಕಲ್ಲೆಸೆದು ಕಳ್ಳರ ಓಡಿಸಿದ ವೃದ್ಧ
Team Udayavani, Jul 16, 2019, 5:56 AM IST
ಸಾಂದರ್ಭಿಕ ಚಿತ್ರ.
ಔರಂಗಾಬಾದ್: ಇಲ್ಲಿನ ಪಡೇಗಾಂವ್ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು ಏಕಾಂಗಿಯಾಗಿ ಓಡಿಸಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.
ಎಟಿಎಂ ದೋಚಲು ಬಂದಿದ್ದ ಕಳ್ಳರು, ಗ್ಯಾಸ್ ಕಟರ್ನಿಂದ ಮಷೀನ್ನ ಹೊರ ಹೊದಿಕೆ ಕತ್ತರಿಸಿದಾಗ ಸದ್ದಾಗಿದೆ. ಆಗ ಹತ್ತಿರದ ಕಟ್ಟಡವೊಂದರ ವಾಚ್ಮನ್ ಶೇಖ್ ಸಮದ್ ಅಹ್ಮದ್ (73) ಎಚ್ಚರಗೊಂಡಿದ್ದು ಕಳ್ಳತನ ಅರಿವಿಗೆ ಬಂದಿದೆ. ತಕ್ಷಣವೇ 100 ಸಂಖ್ಯೆಗೆ ಡಯಲ್ ಮಾಡಿದ್ದಾರೆ. ಪಕ್ಕದವರನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ.
ಆಗ, ತಾವಿದ್ದ ಕಟ್ಟಡದ ಬಾಲ್ಕನಿ ಯಿಂದಲೇ ಕಳ್ಳರ ಮೇಲೆ ಕಲ್ಲು ಎಸೆಯಲು ಆರಂಭಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಕಳ್ಳರು, ತಮ್ಮ ಕೆಲಸ ಅಲ್ಲಿಗೇ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಎಟಿಎಂನಲ್ಲಿದ್ದ 25.41 ಲಕ್ಷ ರೂ. ಕಳ್ಳರ ಪಾಲಾಗುವುದು ತಪ್ಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
MUST WATCH
ಹೊಸ ಸೇರ್ಪಡೆ
Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ