ಅಮರನಾಥ ಯಾತ್ರೆ: 782 ಯಾತ್ರಿಕರ ಹೊಸ ತಂಡ ನಿರ್ಗಮನ
Team Udayavani, Jul 27, 2018, 12:28 PM IST
ಜಮ್ಮು : 782 ಯಾತ್ರಿಕರನ್ನು ಒಳಗೊಂಡ ಹೊಸ ತಂಡ ಇಂದು ಇಲ್ಲಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ಗುಹಾ ದೇವಾಲಯಕ್ಕೆ ಯಾತ್ರೆ ಹೊರಟಿತು.
60 ದಿನಗಳ ಅಮರನಾಥ ಯಾತ್ರೆಯ ಕಳೆದ ಜೂನ್ 28ರಂದು ಅನಂತನಾಗ್ ಜಿಲ್ಲೆಯ ಪೆಹಲ್ಗಾಂವ್ ಮತ್ತು ಗಂದೇರ್ಬಾಲ್ ಜಿಲ್ಲೆಯ ಬಲ್ತಾಲ್ ಮಾರ್ಗವಾಗಿ ಆರಂಭಗೊಂಡಿದ್ದು ಈ ತನಕ ಒಟ್ಟು 2.49 ಲಕ್ಷ ಯಾತ್ರಿಕರು ಯಾತ್ರೆಯನ್ನು ಕೈಗೊಂಡಿದ್ದಾರೆ.
ಹಾಗಿದ್ದರೂ ಕಳೆದೊಂದು ವಾರದಿಂದ ಅಮರನಾಥ ಯಾತ್ರೆ ಕೈಗೊಳ್ಳುವವರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಇಂದು ಯಾತ್ರೆ ಹೊರಟ 782 ಯಾತ್ರಿಕರು 26 ವಾಹನಗಳ ಮೂಲಕ, ಬಿಗಿ ಭದ್ರತೆಯಲ್ಲಿ, ಇಲ್ಲಿಂದ ನಿರ್ಗಮಿಸಿದರು.
ಅಮರನಾಥ ಯಾತ್ರೆ ರಕ್ಷಾ ಬಂಧನ ಹಬ್ಬದೊಂದಿಗೆ ಆಗಸ್ಟ್ 26ರಂದು ಮುಗಿಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು