7ನೇ ವೇತನ ಆಯೋಗ: ಕೇಂದ್ರ ನೌಕರರಿಗೆ ಜುಲೈನಿಂದ ಹೆಚ್ಚಿಸಲ್ಪಟ್ಟ ಭತ್ಯೆ
Team Udayavani, Jun 10, 2017, 11:55 AM IST
ಹೊಸದಿಲ್ಲಿ : ಏಳನೇ ವೇತನ ಆಯೋಗ ಶಿಫಾರಸು ಮಾಡಿರುವ ಹೆಚ್ಚಿಸಲ್ಪಟ್ಟ ಪರಿಷ್ಕೃತ ಭತ್ಯೆಯನ್ನು ಪಡೆಯಲು ತುದಿಗಾಲಲ್ಲಿ ಕಾಯುತ್ತಿರುವ ಕೇಂದ್ರ ಸರಕಾರಿ ನೌಕರರು ಮುಂದಿನ ಜುಲೈ ತಿಂಗಳಿಂದ ಈ ಭತ್ಯೆಯನ್ನು ಪಡೆಯಲಿದ್ದಾರೆ ಎಂದು ಆರ್ಥಿಕ ಸಮಾಚಾರದ ದೈನಿಕವೊಂದು ವರದಿ ಮಾಡಿದೆ.
ಜುಲೈ ತಿಂಗಳಿಂದ ಕೇಂದ್ರ ಸರಕಾರ ತನ್ನ ನೌಕರರಿಗೆ ಎಚ್ಆರ್ಎ (ಮನೆ ಬಾಡಿಗೆ ಭತ್ಯೆ) ಸಹಿತ ಪರಿಷ್ಕತ ಭತ್ಯೆಯನ್ನು ಕೇಂದ್ರ ಸರಕಾರ ತನ್ನ ನೌಕರರಿಗೆ ನೀಡಲಿದೆ ಎಂದು ಫೈನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ.
ಈ ಸಂಬಂಧವಾಗಿ ಕೇಂದ್ರ ಸಚಿವ ಸಂಪುಟವು ಈ ವಾರ ಅತ್ಯಂತ ಮಹತ್ವದ ಸಭೆಯೊಂದನ್ನು ನಡೆಸಲಿದ್ದು 7ನೇ ವೇತನ ಆಯೋಗದ ಶಿಫಾರಸನ್ನು ಆಧರಿಸಿದ ಎಚ್ಆರ್ಎ ಮತ್ತು ಪರಿಷ್ಕೃತ ಭತ್ಯೆಯ ಕುರಿತು ಚರ್ಚೆ ನಡೆಸಲಿದೆ.
ಕಾರ್ಯದರ್ಶಿಗಳ ದತ್ತಾಧಿಕಾರ ಸಮಿತಿಯು ಕಳೆದ ಶುಕ್ರವಾರದಂದು ಪರಿಷ್ಕೃತ ಭತ್ಯೆ ಕುರಿತಾದ ತನ್ನ ಅಂತಿಮ ವರದಿಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದೆ.
ಎಕ್ಸ್, ವೈ ಮತ್ತು ಝಡ್ ವರ್ಗದ ನಗರಗಳಿಗೆ ಅನ್ವಯವಾಗುವಂತೆ ಎಚ್ಆರ್ಎ ಯನ್ನು ಮೂಲ ವೇತನದ ಶೇ.24, ಶೇ.16 ಮತ್ತು ಶೇ.8ರ ಪ್ರಮಾಣದಲ್ಲಿ ನಿಗದಿಸಬೇಕೆಂಬ ಎ ಕೆ ಮಾಥುರ್ ಮಂಡಳಿಯ ಅಭಿಪ್ರಾಯವನ್ನು ಕಾರ್ಯದರ್ಶಿಗಳ ದತ್ತಾಧಿಕಾರ ಸಮಿತಿಯು ಬೆಂಬಲಿಸಿರುವುದಾಗಿ ತಿಳಿದು ಬಂದಿದೆ.
ಆ ಪ್ರಕಾರ ಶೇ.50 ಡಿಎ ದಾಟಿದ ಸಂದರ್ಭಗಳಲ್ಲಿ ನಗರ ವರ್ಗಗಳಿಗೆ ಅನುಕ್ರಮವಾಗಿ ಎಚ್ಆರ್ಎ ಯನ್ನು ಶೇ.27, ಶೇ.18 ಮತ್ತು ಶೇ.9ರ ಮಟ್ಟದಲ್ಲಿ ಪರಿಷ್ಕರಿಸಲಾಗುವುದು. ಅದೇ ರೀತಿ ಡಿಎ ಶೇ.100 ದಾಟಿದ ಸಂದರ್ಭದಲ್ಲಿ ಎಚ್ಆರ್ಎ ನಗರ ವರ್ಗಗಳಿಗೆ ಅನುಕ್ರಮವಾಗಿ ಶೇ.30, ಶೇ.20 ಮತ್ತು ಶೇ.10ರ ಮಟ್ಯದಲ್ಲಿ ನಿಗದಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
MUST WATCH
ಹೊಸ ಸೇರ್ಪಡೆ
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Kolkata Raiders ಕೋಚ್ ಬಗ್ಗೆ ಆಟಗಾರ ಡೇವಿಡ್ ವೀಸ್ ಆರೋಪ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ