ನಾಳೆಯಿಂದ ಏನೇನು ಬದಲಾವಣೆ?
Team Udayavani, Aug 31, 2021, 6:40 AM IST
ಸೆ.1ರಿಂದ ವಿತ್ತೀಯ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಹೀಗಾಗಿ ನಿಮ್ಮ ವ್ಯವಹಾರಗಳನ್ನು ನಡೆಸುವ ಮುನ್ನ ಯಾವ ಕ್ಷೇತ್ರದಲ್ಲಿ ಏನು ಬದಲಾವಣೆಯಾಗಲಿದೆ ಎಂಬುದರ ಬಗ್ಗೆ ಪಕ್ಷಿ ನೋಟ ಇಲ್ಲಿದೆ.
ಪಿಎಫ್ – ಆಧಾರ್ ಲಿಂಕ್ :
ವೇತನ ಪಡೆಯುವ ವರ್ಗಕ್ಕೆ ಈ ಅಂಶ ಪ್ರಧಾನವಾದದ್ದು. ಒಂದು ವೇಳೆ ಲಿಂಕ್ ಮಾಡಿಲ್ಲದೇ ಇದ್ದರೆ ಉದ್ಯೋಗದಾತರು ಉದ್ಯೋಗಿಗಳ ಖಾತೆಗೆ ತಮ್ಮ ಪಾಲಿನ ಪಿಎಫ್ ಜಮೆ ಅಸಾಧ್ಯ.
ಸಿಲಿಂಡರ್ ದರ ಹೆಚ್ಚಳ :
ಪ್ರತೀ ತಿಂಗಳ ಆರಂಭದಲ್ಲಿ ಸರಕಾರ ಅಡುಗೆ ಅನಿಲ ಪರಿಷ್ಕರಿಸುತ್ತದೆ. ಈಗಾಗಲೇ ಸಬ್ಸಿಡಿ ರಹಿತ ಸಿಲಿಂಡರ್ ದರವನ್ನು 25 ರೂ.ಗಳನ್ನು ಹೆಚ್ಚಿಸಲಾಗಿದೆ.
ಪಾನ್- ಆಧಾರ್ ಲಿಂಕ್ :
ವಿಶೇಷವಾಗಿ ಎಸ್ಬಿಐನಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದವರಿಗೆ ಈ ನಿಯಮ ಅನ್ವಯ. ಪಾನ್ ಮತ್ತು ಆಧಾರ್ ಲಿಂಕ್ ಮಾಡದೇ ಇದ್ದರೆ ವಿತ್ತೀಯ ವಹಿವಾಟು ನಡೆಸಲು ಅಸಾಧ್ಯ. ಹೀಗಾಗಿ ಪಾನ್- ಆಧಾರ್ ಲಿಂಕ್ಗೆ ಕ್ರಮ ಕೈಗೊಳ್ಳಬೇಕು.
ಚೆಕ್ ಕ್ಲಿಯರೆನ್ಸ್ :
ಪಾಸಿಟಿವ್ ಪೇ ಸಿಸ್ಟಮ್ ಮೂಲಕ ಚೆಕ್ಗಳನ್ನು ಕ್ಲಿಯರೆನ್ಸ್ಗೆ ಕಳುಹಿಸಲಾಗುತ್ತದೆ. 50 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತ ಅಥವಾ 5 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ಚೆಕ್ ಅನ್ನು ನೀಡುವುದಿದ್ದರೆ, ಮುಂಚಿತವಾಗಿಯೇ ಬ್ಯಾಂಕ್ ಶಾಖೆಗೆ ಮಾಹಿತಿ ನೀಡಬೇಕು. ಬ್ಯಾಂಕ್ ಶಾಖೆಯ ಅಧಿಕಾರಿಗಳು ಮಾಹಿತಿಯನ್ನು ಆಧರಿಸಿ ಚೆಕ್ ಅನ್ನು ಕ್ಲಿಯರೆನ್ಸ್ಗೆ ಕಳುಹಿಸುತ್ತಾರೆ. ಮುಂಚಿತ ಮಾಹಿತಿ ನೀಡದೇ ಇದ್ದರೆ, ಚೆಕ್ ಬೌನ್ಸ್ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ
MUST WATCH
ಹೊಸ ಸೇರ್ಪಡೆ
IPL 2024; ಚಹಲ್ 200 ವಿಕೆಟ್ಗಳ ಕಮಾಲ್; ಈ ಸಾಧನೆಗೈದ ಮೊದಲ ಬೌಲರ್
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ