ಸುಪ್ರೀಂಗೆ ಅರ್ಜಿ ಹಾಕಿದ ವಕೀಲರಿಗೆ 8 ಲಕ್ಷ ರೂ. ದಂಡ
Team Udayavani, May 17, 2022, 9:21 PM IST
ನವದೆಹಲಿ: ಟ್ರಾಫಿಕ್ ಸಾಂಧ್ರತೆ, ವಾಯುಮಾಲಿನ್ಯದ ನಿಯಮಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಇಬ್ಬರು ವಕೀಲರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, 8 ಲಕ್ಷ ರೂ. ಅನುಕರಣೀಯ ದಂಡ ವಿಧಿಸಿದೆ.
ಸುಪ್ರೀಂ ಕೋರ್ಟ್ನ ಇಬ್ಬರು ವಕೀಲರು, ವಾಹನಗಳ 10-15 ವರ್ಷಗಳ ನೋಂದಣಿ ನಿಯಮ ಅನೂರ್ಜಿತ ಮತ್ತು ಕಾನೂನುಬಾಹಿರ ಎಂದು ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ನ್ಯಾಯಾಲಯ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ : ಜಿಎಸ್ಟಿ ಪೋರ್ಟಲ್ನಲ್ಲಿ ತಾಂತ್ರಿಕ ದೋಷ: ಜಿಎಸ್ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?
“ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಮಾಲಿನ್ಯಕ್ಕೆ ಸಂಬಂಧಪಟ್ಟ ಎಲ್ಲ ಆದೇಶಗಳನ್ನು ನೋಡಿದ ನಂತರವೂ ಈ ರೀತಿಯ ಅರ್ಜಿ ಸಲ್ಲಿಸುತ್ತಿದ್ದೀರ’ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.