ಕೃಷಿ ಮಸೂದೆಗೆ ವಿರೋಧ, ಮೇಲ್ಮನೆ ಕೋಲಾಹಲ: ಎಂಟು ಸಂಸದರು ಅಮಾನತು-ವೆಂಕಯ್ಯ ನಾಯ್ಡು
ಅಮಾನತುಗೊಂಡಿದ್ದ ಸಂಸದರು ಕಲಾಪದಿಂದ ಹೊರನಡೆಯಲು ವಿರೋಧ
Team Udayavani, Sep 21, 2020, 12:11 PM IST
ನವದೆಹಲಿ:ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಅಂಗೀಕಾರ ವೇಳೆ ಪ್ರತಿಪಕ್ಷ ಸದಸ್ಯರು ಉಪಸಭಾಪತಿಯತ್ತ ನಿಯಮಾವಳಿ ಪುಸ್ತಕ ತೂರಿ, ಕಾಗದ ಪತ್ರ ಹರಿದು ಎಸೆದು ಕೋಲಾಹಲ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ಸದಸ್ಯ ಡೆರಿಕ್ ಒಬ್ರಿಯಾನ್ ಸೇರಿದಂತೆ 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ್ದಾರೆ.
ಕೃಷಿ ಮಸೂದೆ ವಿರೋಧಿಸಿದ್ದ ಸಂಸದ ಡೆರಿಕ್ ಒಬ್ರಿಯಾನ್, ಸಂಜಯ್ ಸಿಂಗ್, ರಾಜೀವ್ ಸಟಾವ್, ಕೆಕೆ ರಾಗೇಶ್, ಸೈಯದ್ ನಾಝಿ ಹುಸೈನ್, ಡೋಲಾ ಸೇನ್, ನಿಪುನ್ ಬೋರಾ ಮತ್ತು ಇಳಮಾರನ್ ಕರೀಂ ಸೇರಿದಂತೆ ಏಳು ಮಂದಿ ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವಿ.ವೆಂಕಯ್ಯ ನಾಯ್ಡು ಅವರು ಸೋಮವಾರ (ಸೆಪ್ಟೆಂಬರ್ 21, 2020) ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಜೀವಕಳೆ ಪಡೆದ ಚಾರ್ಮಾಡಿ ಜಲಪಾತಗಳು: ಅಲ್ಲಲ್ಲಿ ಗುಡ್ಡ ಕುಸಿತ
ಒಬ್ರಿಯಾನ್, ಡೋಲಾ ಸೇನ್ ತೃಣಮೂಲ ಕಾಂಗ್ರೆಸ್ ಸದಸ್ಯರು, ಹುಸೈನ್, ಬೋರಾ ಮತ್ತು ಸಟಾವ್ ಕಾಂಗ್ರೆಸ್ ಪಕ್ಷದ ಸಂಸದರು, ಸಂಜಯ್ ಸಿಂಗ್ ಆಪ್ ಸಂಸದ, ರಾಗೇಶ್ ಮತ್ತು ಕರೀಂ ಸಿಪಿಐ(ಎಂ) ಪಕ್ಷದ ಸಂಸದರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ