‘ನಾನಿಲ್ಲಿ ಸಾಯಲು ಬಂದಿದ್ದೇನೆ; ನನ್ನನ್ನು ರಕ್ಷಿಸಬೇಡಿ’: ಸಿಂಹದ ಎದುರು ನಿಂತ ಕುಡುಕನ ಮನವಿ!
Team Udayavani, Oct 17, 2019, 11:42 PM IST
ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿರುವ ಮೃಗಾಲಯದಲ್ಲಿ ಗುರುವಾರದಂದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೃಗಾಲಯದ ಸಿಬ್ಬಂದಿಗೆ ಪೀಕಲಾಟ ಶುರುವಾಗಿತ್ತು. ಇದಕ್ಕೆಲ್ಲ ಕಾರಣವಾಗಿದ್ದು 28 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಮೃಗಾಲಯದಲ್ಲಿ ಸಿಂಹಗಳಿದ್ದ ಪ್ರದೇಶದ ಆವರಣ ಬೇಲಿಯನ್ನು ಜಿಗಿದು ಒಳನುಗ್ಗಿದ್ದು!
ಹೌದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ರಕ್ಷಣಾ ಬೇಲಿಯನ್ನು ಜಿಗಿದ ಆ ವ್ಯಕ್ತಿ ಸೀದಾ ಸಿಂಹವೊಂದರ ಎದುರು ನಿಂತೇ ಬಿಟ್ಟಿದ್ದ. ಆ ಸಿಂಹವಾದ್ರೂ ಯಾವ ಮೂಡಿನಲ್ಲಿತ್ತೋ, ತನ್ನೆದುರು ಬಂದು ನಿಂತ ವ್ಯಕ್ತಿಯನ್ನು ಹಾಗೇ ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿತು. ಆ ವ್ಯಕ್ತಿಯಾದ್ರೂ ಸಿಂಹದ ಎದುರಿನಲ್ಲಿ ಚಿತ್ರವಿಚಿತ್ರವಾಗಿ ವರ್ತಿಸಲಾರಂಭಿಸಿದ. ಈತನ ಹುಚ್ಚಾಟವನ್ನು ನೋಡುತ್ತಲೇ ಇದ್ದ ಆ ಸಿಂಹ ಆತನ ಬಳಿಗೆ ಬಂದು ಆತನಿಗೊಂಡು ಸುತ್ತುಹಾಕಿ ತನ್ನ ಮುಂಗಾಲೆರಡನ್ನು ಆತನ ಮೇಲೆ ಇರಿಸಲು ಪ್ರಯತ್ನಿಸುವ ರೋಚಕ ದೃಶ್ಯ ಮೊಬೈಲ್ ಕೆಮರಾದಲ್ಲಿ ಸೆರೆಯಾಗಿದೆ.
ಆ ಬದಿಯಲ್ಲಿ ಇಷ್ಟೆಲ್ಲಾ ರಾಮಾಯಣ ಆಗುತ್ತಿರುವಾಗ ವಿಷಯ ತಿಳಿದು ಗಾಬರಿ ಬಿದ್ದು ಅಲ್ಲಿಗೆ ಆಗಮಿಸಿದ ಮೃಗಾಲಯದ ಸಿಬ್ಬಂದಿ ಆ ಸಿಂಹಕ್ಕೆ ಮಂಪರು ಬರಿಸಿ ಆತನನ್ನು ಅಲ್ಲಿಂದ ಕರೆದುಕೊಂಡುಬಂದು ವಿಚಾರಣೆ ನಡೆಸಿದ್ದಾರೆ.
‘ತಾನು ಬಿಹಾರದ ಚಂಪಾರಣ್ ಜಿಲ್ಲೆಯವನಾಗಿದ್ದು ಸಾಯುವ ಉದ್ದೇಶದಿಂದಲೇ ನಾನು ಆವರಣಗೋಡೆ ಜಿಗಿದು ಸಿಂಹದ ಹತ್ತಿರ ಹೋಗಿದ್ದೆ’ ಎಂದು 28 ವರ್ಷ ಪ್ರಾಯದ ರೆಹಾನ್ ಖಾನ್ ಎನ್ನುವ ಆ ವ್ಯಕ್ತಿ ಹೇಳಿದ್ದಾನೆ. ಮತ್ತು ಈ ಸಂದರ್ಭದಲ್ಲಿ ರೆಹಾನ್ ಖಾನ್ ಪಾನಮತ್ತನಾಗಿದ್ದ ಎಂಬ ವಿಚಾರವೂ ಇದೀಗ ಬಹಿರಂಗವಾಗಿದೆ.
ರೆಹಾನ್ ಆವರಣ ಗೋಡೆಯನ್ನು ಜಿಗಿದು ಒಳ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅವರಿಂದ ತಪ್ಪಿಸಿಕೊಂಡು ಆತ ಸಿಂಹದ ಬಳಿಗೆ ಸಾಗಿದ್ದಾನೆ. ಮತ್ತು ರೆಹಾನ್ ಅಲ್ಲಿಂದ ಹೊರಬರಲು ಏಣಿಯೊಂದನ್ನು ಇರಿಸಿದರೂ ಆತ ಸಿಂಹದ ಎದುರಿನಿಂದ ಕದಲಲಿಲ್ಲ. ಹಾಗಾಗಿ ನಾವು ಅನಿವಾರ್ಯವಾಗಿ ಸಿಂಹಕ್ಕೆ ಮಂಪರು ಬರಿಸಿ ಆ ಕುಡುಕನನ್ನು ರಕ್ಷಿಸಬೇಕಾಯಿತು ಎಂದು ಮೃಗಾಲಯದ ಮಾಧ್ಯಮ ವಕ್ತಾರ ರಿಯಾಝ್ ಅಹಮ್ಮದ್ ಎಂಬುವವರು ಮಾಹಿತಿ ನೀಡಿದ್ದಾರೆ.
ಅಂತೂ ತಾನು ಸಾಯಲು ಹೋಗಿ ಮೃಗಾಲಯದ ಸಿಬ್ಬಂದಿ ಮತ್ತು ಅಲ್ಲಿದ್ದವರನ್ನೆಲ್ಲಾ ಕೆಲಕ್ಷಣ ಭಯಭೀತರನ್ನಾಗಿಸಿದ ಈ ಭಲೇ ಕುಡುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
#WATCH Delhi: A man entered into enclosure of a lion at Delhi Zoo after climbing its metal grille. He was later brought out safely. DCP(Southeast)says “He’s Rehan Khan, a 28-yr-old man from Bihar. He seems to be mentally unstable.He was immediately brought out without any injury” pic.twitter.com/t5n6bfPx7p
— ANI (@ANI) October 17, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
MUST WATCH
ಹೊಸ ಸೇರ್ಪಡೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !