ಇದು ಸಾಮರಸ್ಯದ ಮದರಸಾ
Team Udayavani, May 24, 2018, 6:00 AM IST
ಲಕ್ನೋ: ಸಾಮಾನ್ಯವಾಗಿ ಮದರಸಾ ಎಂದಾಕ್ಷಣ ಅದು ಒಂದು ಧರ್ಮೀಯರಿಗಷ್ಟೇ ಸೀಮಿತ ಎನ್ನುವ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಈ ಮದರಸಾದಲ್ಲಿ ಎಲ್ಲಾ ಧರ್ಮೀಯರೂ ಉತ್ತಮ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ!
ಹೌದು. ಇಂಥದ್ದೊಂದು ಅಪರೂಪದ “ಮದರಸಾ’ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿದೆ. ಸುಡು ಬಿಸಿಲಿನಲ್ಲಿ ಕಾದು ಸುಡುವ ತಗಡಿನಡಿಯಲ್ಲಿ ಕುಳಿತಿರುವ ಅಲ್ ಹುಸೈನ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಪ್ರತಿದಿನ ಅಲ್ಲಾಹು ಅಕºರ್ ಎಂದೂ, ಜೈ ಹನುಮಾನ್ ಜ್ಞಾನಗುಣ ಸಾಗರ್ ಎಂದೂ ಪ್ರಾರ್ಥಿಸುತ್ತಾರೆ. ಅರೇಬಿಕ್ ಜತೆ ಜೊತೆಗೆ ಸಂಸ್ಕೃತ ಪಾಠವೂ ಇಲ್ಲಿ ನಡೆಯುತ್ತದೆ. ಇನ್ನೂ ಒಂದು ಅಚ್ಚರಿಯ ಸಂಗತಿ ಏನೆಂದರೆ, ಈ ಶಾಲೆಯಲ್ಲಿ ಹಿಂದೂ, ಮುಸ್ಲಿಂ ಎರಡೂ ಸಮುದಾಯಕ್ಕೆ ಸೇರಿದ ಶಿಕ್ಷಕರಿದ್ದಾರೆ.
ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕಾಲೇಜಿನ ಪತ್ರಿಕೋದ್ಯಮ ಪದವೀಧರ, ಪತ್ರಕರ್ತ ಖಾಜಿ ಫರ್ಖಾನ್ ಅಖ್ತರ್ ಅವರು ಉದ್ಯೋಗ ತೊರೆದ ಬಳಿಕ 2015ರಲ್ಲಿ ಈ ಮದರಸಾ ಆರಂಭಿಸಿದರು. ಹುಟ್ಟಿ ಬೆಳೆದ ಊರಿಗೆ ಭೇಟಿ ನೀಡಿದ ವೇಳೆ ಶಿಕ್ಷಣ ಸಂಸ್ಥೆ ಆರಂಭಿಸಬೇಕೆನ್ನುವ ಆಸೆ ಇತ್ತು. ಎಲ್ಲಾ ಸಮುದಾಯದವರೂ ಶಿಕ್ಷಣ ಪಡೆಯುವಂತಹ ಶಾಲೆ ಇದಾಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಿದ್ದಾಗಿ ಸ್ವತಃ ಖಾಜಿ ಅವರೇ ಹೇಳಿಕೊಂಡಿದ್ದಾರೆ.
ಮದರಸಾ ಎಂದರೆ ಕೇವಲ ಮುಸ್ಲಿಂ ಸಮುದಾಯಕ್ಕೆ ಎನ್ನುವ ಭಾವನೆ ಇದೆ. ಸಮಾಜದಲ್ಲಿ ಅದು ಬದಲಾಗ ಬೇಕು. ಎಲ್ಲಾ ಸಮುದಾಯದವರೂ ಮದರಸಾಗಳಲ್ಲಿ ಶಿಕ್ಷಣ ಪಡೆಯುವ ವಾತಾವರಣ ನಿರ್ಮಾಣಗೊಳ್ಳ ಬೇಕು. ಅದೇ ನಮ್ಮ ಗುರಿ.
ಖಾಜಿ ಫರ್ಖಾನ್ ಅಖ್ತರ್, ಶಾಲೆ ಸಂಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ