ಸೇನೆಗೆ ತಲೆನೋವಾದ ಕಾರ್‌ ಬಾಂಬ್‌ ಭೀತಿ


Team Udayavani, Feb 17, 2019, 12:30 AM IST

v-9.jpg

ಕಾಶ್ಮೀರದಲ್ಲಿ ಉಗ್ರರು ತಮ್ಮ ಕಾರ್ಯತಂತ್ರವನ್ನು ಆಗಾಗ ಬದಲಿಸುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅತ್ಯಂತ ಭೀಕರ ಹಾಗೂ ಕ್ರೂರವಾದ ದಾರಿ ಹಿಡಿದಿರುವ ಉಗ್ರರು ಸ್ಫೋಟ ನಡೆಸುವುದಕ್ಕಾಗಿ, ವಾಹನಗಳಲ್ಲಿ ಐಇಡಿಗಳನ್ನಿಡುವ ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಗುಪ್ತಚರ ಪಡೆಗಳು ಇನ್ನೂ ಇಂತಹ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಮುನ್ನೆಚ್ಚರಿಕೆ ನೀಡಿರುವುದು ಈಗ ಭಾರತೀಯ ಸೇನೆಯ ನಿದ್ದೆಗೆಡಿಸಿದೆ.

ಐಇಡಿಗಳು ಅತ್ಯಂತ ವೆಚ್ಚದಾಯಕವಾಗಿದ್ದರಿಂದ ಹಾಗೂ ಇದನ್ನು ಕಾರಿಗೆ ಅಳವಡಿಸಲು ಪರಿಣಿತಿ ಅಗತ್ಯವಿರುವುದರಿಂದ ಒಂದೇ ಬಾರಿಗೆ ಉಗ್ರರು ಹಲವು ಕಾರುಗಳಿಗೆ ಐಇಡಿ ಅನ್ನು ಅಳವಡಿಸಿರುವ ಸಾಧ್ಯತೆಯಿದೆ. ಪಾಕಿಸ್ಥಾನದ ಗಡಿ ದಾಟಿ ಬಂದ ಪರಿಣಿತ ಉಗ್ರರು ಈ ಐಇಡಿಗಳನ್ನು ವಾಹನಗಳಿಗೆ ಅಳವಡಿಸಿ ಗಡಿಯಾಚೆ ತೆರಳಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದರಲ್ಲಿ ಪರಿಣಿತಿ ಹೊಂದಿದ್ದಾನೆ ಎನ್ನಲಾದ ಜೈಶ್‌ ಎ ಮೊಹಮ್ಮದ್‌ ಕಮಾಂಡರ್‌ ಅಬ್ದುಲ್‌ ರಶೀದ್‌ ಘಾಜಿಯನ್ನು ಹುಡುಕಲು ಸೇನೆ ನಿರ್ಧರಿಸಿದೆ. ಅಲ್ಲದೆ, ಈ ಐಇಡಿಗಳನ್ನು ಅಳವಡಿಸಿದ ಸ್ಥಳವನ್ನು ಪತ್ತೆ ಮಾಡಲೂ ನಿರ್ಧರಿಸಲಾಗಿದೆ. ಇನ್ನೊಂದೆಡೆ ಇಂತಹ ದಾಳಿಯನ್ನು ನಿರ್ವಹಿಸುವ ಬಗ್ಗೆಯೂ ಸೇನೆ ರೂಪುರೇಷೆ ರಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೀವಹಾನಿ ಹೆಚ್ಚು: ವಾಹನಗಳಲ್ಲಿ  ಐಇಡಿಗಳನ್ನು ಇಟ್ಟು ಸ್ಫೋಟಗೊಳಿಸುವುದರಿಂದ ಅತ್ಯಂತ ಹೆಚ್ಚಿನ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಯುದ್ಧದ ಪ್ರದೇಶಗಳಲ್ಲಿ ಇದನ್ನು ಉಗ್ರರು ಹೆಚ್ಚಾಗಿ ಬಳಸುತ್ತಾರೆ. ಇಂತಹ ದಾಳಿಗಳಲ್ಲಿ ವಾಹನದ ಭಾಗಗಳೇ ಆಯುಧಗಳಾಗಿ ಕೆಲಸ ಮಾಡುತ್ತವೆ. ಇಂಧನ ಟ್ಯಾಂಕ್‌ ಸಿಡಿಯುವುದರಿಂದ, ಸ್ಫೋಟದ ತೀವ್ರತೆಯೂ ಹೆಚ್ಚುತ್ತದೆ. ಸ್ಫೋಟಗೊಂಡ ಸ್ಥಳದಲ್ಲಿ ಬೇಗ ಬೆಂಕಿ ಹೊತ್ತಿಕೊಳ್ಳುವುದರಿಂದ ಜೀವಹಾನಿಯೂ ಹೆಚ್ಚುತ್ತದೆ.

ಸ್ಫೋಟಿಸುವುದು ಹೇಗೆ?: ಇರಾಕ್‌ ಮತ್ತು ಅಪಾ^ನಿಸ್ತಾನದಲ್ಲಿ ಕಾರ್‌ ಬಾಂಬ್‌ಗಳು ಸೇನೆಗೆ ಭಾರಿ ತಲೆನೋವಾಗಿತ್ತು. ಇವುಗಳನ್ನು ಒಮ್ಮೆ ಅಳವಡಿಸಿದರೆ ಯಾವುದೇ ಕ್ಷಣದಲ್ಲಾದರೂ ಸಿಡಿಸಬಹುದು. ಕಾರು ಚಲನೆಯಲ್ಲಿರುವಾಗ ಬಾಂಬ್‌ ಪತ್ತೆ ಸಾಧ್ಯವೂ ಇಲ್ಲ. ಕಾರ್‌ ಪರಿಶೀಲನೆ ಮಾಡುವಾಗಲೇ ಸಿಡಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಇದನ್ನು ತಡೆಯುವುದು ಅತ್ಯಂತ ಕಷ್ಟಕರ ಎಂದು ಹೇಳಲಾಗುತ್ತದೆ. ಕಾರ್‌ನಲ್ಲಿನ ಹಿಂಬದಿ ಸೀಟ್‌ನಲ್ಲಿ ಅಥವಾ ಬೂಟ್‌ ಸ್ಪೇಸ್‌ನಲ್ಲಿ ಬಾಂಬ್‌ ಇಡಲಾಗುತ್ತದೆ. ಚಾಲಕರ ಬದಿ ಬಾಗಿಲು ತೆಗೆದಾಗ ಅಥವಾ ಇಂಜಿನ್‌ ಆಫ್ ಮಾಡಿದಾಗ ಅಥವಾ ಅಕ್ಸಲರೇಟರ್‌ ಸಂಪೂರ್ಣ ಒತ್ತಿದಾಗ ಸ್ಫೋಟಗೊಳ್ಳುವಂತೆ ಹೊಂದಿಸಬಹುದಾಗಿರುತ್ತದೆ.

ಟಾಪ್ ನ್ಯೂಸ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

1-eqwewq

Sunil Narine ನಿವೃತ್ತಿ ತೊರೆದು ಟಿ20 ವಿಶ್ವಕಪ್‌ ಆಡಲಿ: ಪೊವೆಲ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.