ಟೆಲಿಕಾಂ ಕಂಪೆನಿಗಳಿಗೆ ಪ್ಯಾಕೇಜ್?
Team Udayavani, Nov 16, 2019, 5:26 AM IST
ಹೊಸದಿಲ್ಲಿ: ದೂರ ಸಂಪರ್ಕ ಕ್ಷೇತ್ರದ ಕಂಪೆನಿಗಳಿಗೆ ಉತ್ತೇಜನ ಪ್ಯಾಕೆಜ್ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಮೊಬೈಲ್ ಕರೆ, ಇಂಟರ್ನೆಟ್ಗಳಿಗೆ ಕನಿಷ್ಠ ದರ ನಿಗದಿ ಮಾಡುವ ಸಾಧ್ಯತೆ ಇದೆ. ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ಎಂಟಿಎನ್ಎಲ್ ಸೇರಿಕೊಂಡಂತೆ ಎಲ್ಲ ದೂರಸಂಪರ್ಕ ಕಂಪೆನಿಗಳು ದೂರಸಂಪರ್ಕ ಇಲಾಖೆಗೆ ಹೊಂದಾಣಿಕೆ ಮಾಡಲಾಗಿರುವ ಒಟ್ಟು ಆದಾಯ (ಎಜಿಆರ್) ಪಾವತಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಬೆಳವಣಿಗೆಗೆ ಕಾರಣ. ಕಾರ್ಯದರ್ಶಿಗಳ ಸಮಿತಿ (ಸಿಒಎಸ್) ಮೊಬೈಲ್ ಕರೆಗಳಿಗೆ, ಇಂಟರ್ನೆಟ್ಗೆ ಮೂಲ ದರ ನಿಗದಿ ಮಾಡಿದರೆ ಸಮಸ್ಯೆಗೆ ಪರಿಹಾರ ಕಾಣಬಹುದು ಎನ್ನುವುದು ಸಲಹೆಯಾಗಿದೆ.
ತೀರ್ಪಿನ ಬಳಿಕ ಏರ್ಟೆಲ್, ವೊಡಾಫೋನ್ಗೆ ಎರಡನೇ ತ್ತೈಮಾಸಿಕದಲ್ಲಿ 70 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿಕೊಂಡಿವೆ. ಸಿಒಎಸ್ ಸಿದ್ಧಪಡಿಸಿದ ಸಲಹಾ ಯೋಜನೆಗೆ ಹಲವು ಹಂತಗಳಿಂದ ಪ್ರತಿಕ್ರಿಯೆಗಳನ್ನು ಬಯಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…