ಫೋಟೋಶಾಪ್ನಲ್ಲೇ ಎವರೆಸ್ಟ್ ಏರಿದ ಪೊಲೀಸ್ ದಂಪತಿ ವಜಾ
Team Udayavani, Aug 11, 2017, 6:15 AM IST
ಹೊಸದಿಲ್ಲಿ: ಮೊಸರನ್ನ ತಿಂದ ಕೋತಿ, ಮೇಕೆ ಮೂತಿಗೆ ಕೈ ಒರೆಸಿದ ಕಥೆಯನ್ನ ನೀವು ಕೇಳಿರ ಬಹುದು. ಈಗ ಇದಕ್ಕೆ ತದ್ವಿರುದ್ಧವಾಗಿರುವ ಇಂಥದ್ದೇ ಒಂದು ಕಥೆ ಎವರೆಸ್ಟ್ ಶಿಖರದ ತುತ್ತ ತುದಿಯಿಂದ ಬಂದಿದೆ. ಈ ಕಥೆಯಲ್ಲಿ ಸಾಧನೆ ಮಾಡಿದವರು ಯಾರೋ ಆದರೆ, ಇನ್ನಾರೋ ಬಂದು ತಾವೇ ಸಾಧನೆ ಮಾಡಿದಂತೆ ಪೋಸು ನೀಡಿದ್ದಾರೆ.
ಮಹಾರಾಷ್ಟ್ರ ಮೂಲದ ಪೊಲೀಸ್ ಅಧಿಕಾರಿ ದಂಪತಿ, ತಾವು ಜಗತ್ತಿನ ಅತಿ ಎತ್ತರದ ಶಿಖರ ಎವರೆಸ್ಟ್ನ ತುದಿ ತಲುಪಿರುವುದಾಗಿ ನಕಲಿ ಫೋಟೋ (ಫೋಟೋಶಾಪ್ ಮಾಡಿದ ಚಿತ್ರ) ತೋರಿಸಿ ಸಾಧನೆ ಮಾಡಿದವರಂತೆ ಬೀಗಿದ್ದರು. ಆದರೆ ಆ ನಕಲಿ ಫೋಟೋದಲ್ಲಿ ಇದ್ದ ಅಸಲಿ ಸಾಧಕ ಈ ದಂಪತಿಯ ವಂಚನೆ ಬಯಲಿಗೆಳೆದಿದ್ದಾರೆ. ದಂಪತಿ “ತಪ್ಪು ಮಾಹಿತಿ ನೀಡಿ ಇಲಾಖೆಯ ಹಾದಿತಪ್ಪಿಸಿ ದ್ದಾರೆ’ ಎಂದು ಪರಿಗಣಿಸಿದ ಮಹಾರಾಷ್ಟ್ರ ಪೊಲೀಸ್ ಇಲಾಖೆ ಅವರನ್ನು ಕೆಲಸದಿಂದ ವಜಾ ಮಾಡಿದೆ.
ಬಯಲಾದ ವಂಚನೆ: ಆರಂಭದಲ್ಲಿ ಇವರು ಮಹಾನ್ ಸಾಧನೆ ಮಾಡಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಇವರೊಟ್ಟಿಗೆ ಪರ್ವತಾ ರೋ ಹಣ ಶಿಬಿರದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಸತ್ಯರೂಪ್ ಸಿದ್ಧಾಂತ್ ಸಾಕ್ಷಿ ಸಮೇತ ದಂಪತಿಯ ವಂಚನೆ ಬಯಲಿಗೆಳೆದಾಗ ಅಧಿಕಾರಿಗಳಾದಿ ಯಾಗಿ ಎಲ್ಲರೂ ಹೌದಾ ಎಂದು ಹೌಹಾರಿದ್ದಾರೆ.
“ನಾನು ಎವರೆಸ್ಟ್ ಏರಿದಾಗ ತೆಗೆಸಿಕೊಂಡ ಫೋಟೋ ವನ್ನೇ ಈ ದಂಪತಿ ಫೋಟೋಶಾಪ್ನಲ್ಲಿ ಎಡಿಟ್ ಮಾಡಿ ತಮ್ಮ ಮುಖ ಅಂಟಿಸಿದ್ದಾರೆ,’ ಎಂದು ಹೇಳಿದ ಸಿದ್ಧಾಂತ್, ಆನ್ಲೈನ್ನಲ್ಲಿ ತಾವು ಅಪ್ಲೋಡ್ ಮಾಡಿದ್ದ ಚಿತ್ರವನ್ನು ನೇಪಾಲ ಆಡಳಿತದ ಮುಂದಿರಿಸಿದರು. ವಂಚನೆ ಖಚಿತಪಡಿಸಿಕೊಂಡ ನೇಪಾಲ ಆಡಳಿತ ಅವರಿಬ್ಬರೂ 10 ವರ್ಷ ಪರ್ವತಾರೋಹಣ ಮಾಡದಂತೆ ನಿಷೇಧ ಹೇರಿದೆ.
ಏನಿದು ಪ್ರಕರಣ?
ಪರ್ವತಾರೋಹಣ ಹವ್ಯಾಸ ಹೊಂದಿರುವ ಮಹಾರಾಷ್ಟ್ರದ ದಿನೇಶ್ ಹಾಗೂ ತಾರಕೇ ಶ್ವರಿ ರಾಥೋಡ್ ದಂಪತಿ, ತಾವು 2016ರ ಮೇ 23ರಂದು ಮೌಂಟ್ ಎವರೆಸ್ಟ್ ಏರಿದ್ದಾಗಿ ಹೇಳಿ, ಪರ್ವತದ ತುತ್ತ ತುದಿ ಯಲ್ಲಿ ನಿಂತು, ಭಾರತದ ಧ್ವಜ ಹಿಡಿದು ತೆಗೆಸಿಕೊಂಡ ಚಿತ್ರವೊಂದನ್ನು ಸಂಬಂಧಿ ಸಿದ ಇಲಾಖೆಗೆ ನೀಡಿದ್ದರು. ಇದನ್ನು ಸತ್ಯ ಎಂದು ನಂಬಿದ ನೇಪಾಲ ಆಡಳಿತ ಇವರಿಗೆ ಪ್ರಮಾಣಪತ್ರವನ್ನೂ ದಯಪಾಲಿ ಸಿತ್ತು. ಅಲ್ಲದೆ ಎವರೆಸ್ಟ್ ಏರಿದ ಮೊದಲ ದಂಪತಿ ಎಂಬ ಪುಕ್ಕಟೆ ಪ್ರಚಾರವೂ ಸಿಕ್ಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು