ವಿಂಗ್ ಕಮಾಂಡರ್ ಅಭಿನಂದನ್ ಬೆನ್ನುಹುರಿ, ಪಕ್ಕೆಲುಬಿಗೆ ಗಾಯ: ವರದಿ
Team Udayavani, Mar 3, 2019, 12:41 PM IST
ಹೊಸದಿಲ್ಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಎಂಐಆರ್ ಪರೀಕ್ಷೆಯನ್ನು ಭಾನುವಾರ ದೆಹಲಿಯ ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಯಾವುದೇ ಗಂಭೀರ ದೋಷಗಳು ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮೂಲಗಳು ತಿಳಿಸಿರುವಂತೆ ಎಎನ್ಐ ವರದಿಯಲ್ಲಿ, ಅಭಿನಂದನ್ ಅವರ ಕೆಳ ಬೆನ್ನುಹುರಿ ಮತ್ತು ಪಕ್ಕೆಲುಬಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಮಿಗ್ 21 ವಿಮಾನ ಮತ್ತು ಪಾಕ್ನ ಎಫ್-16 ವಿಮಾನದ ನಡುವಿನ ಕದನದಲ್ಲಿ ವಿಮಾನದಿಂದ ಕೆಳ ಬೀಳುವ ವೇಳೆ ಬೆನ್ನುಹುರಿ ಮತ್ತು ಪಕ್ಕೆಲುಬಿಗೆ ಗಾಯವಾಗಿರಬಹುದು ಎನ್ನಲಾಗಿದೆ.
ಪಾಕ್ ಸ್ಥಳೀಯರು ಅಭಿನಂದನ್ ಅವರ ಮೇಲೆ ಗಂಭೀರ ಸ್ವರೂಪದಲ್ಲಿ ಹಲ್ಲೆ ನಡೆಸಿದ್ದು, ಈ ವೇಳೆ ಪಕ್ಕೆಲುಬಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಅಭಿನಂದನ್ ಅವರಿಗೆ ಇನ್ನೂ ಹೆಚ್ಚಿನ ಪರೀಕ್ಷೆಗಳು ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ