ಹೊಸೂರಿನಲ್ಲಿ ಅಪಘಾತ:ಬೆಂಗಳೂರಿನ ವೈದ್ಯ ದಂಪತಿ ದುರ್ಮರಣ
Team Udayavani, Jan 30, 2018, 10:17 AM IST
ಹೊಸೂರು: ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತುಮಿಳುನಾಡಿನ ಸೂಳಗಿರಿಯ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮಂಗಳವಾರ ನಸುಕಿನ 3 ಗಂಟೆಯ ವೇಳೆ ಕಾರಿಗೆ ಲಾರಿ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಫಘಾತದಲ್ಲಿ ಬೆಂಗಳೂರಿನ ಆರ್.ಟಿ.ನಗರ ಮೂಲದ ವೈದ್ಯ ದಂಪತಿ ಮತ್ತು ಲಾರಿ ಚಾಲಕ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿ ವೈದ್ಯ ದಂಪತಿ ಗಳು ಆರ್.ಟಿ.ನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ರಾಮಚಂದ್ರ(74) ಮತ್ತು ಅಂಬುಜಮ್ಮ(52) ಎಂದು ತಿಳಿದು ಬಂದಿದ್ದು, ಇವರು ದೇವಾಲಯಕ್ಕೆ ತೆರಳಿ ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದೆ.
ಲಾರಿ ಚಾಲಕ ಕುಮಾರ್(30) ಎಂಬಾತನೂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸೂಳಗಿರಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ದೇಹಗಳನ್ನು ಸೂಳಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.