ಅದ್ನಾನ್ ಸಾಮಿ ತಂಡವನ್ನು Indian dogs ಎಂದ ಕುವೈಟ್ ಅಧಿಕಾರಿಗಳು
Team Udayavani, May 7, 2018, 3:53 PM IST
ಹೊಸದಿಲ್ಲಿ : ಪಾಕ್ ಸಂಜಾತ, ಭಾರತೀಯ ಪ್ರಜೆ, ಖ್ಯಾತ ಗಾಯಕ, ಅದ್ನಾನ್ ಸಾಮಿ ಅವರ ತಂಡದವರನ್ನು ಈಚೆಗೆ ಕುವೈಟ್ ವಿಮಾನ ನಿಲ್ದಾಣದಲ್ಲಿನ ವಲಸೆ ಅಧಿಕಾರಿಗಳು “ಇಂಡಿಯನ್ ಡಾಗ್ಸ್’ ಎಂದು ಕರೆದಿರುವ ಜನಾಂಗೀಯ ಅವಮಾನದ ಘಟನೆ ವರದಿಯಾಗಿದೆ.
ಅದ್ನಾನ್ ಸಾಮಿ ಅವರು ತನಗೆ ಮತ್ತು ತನ್ನ ತಂಡದವರಿಗೆ ಜನಾಂಗೀಯ ಅವಮಾನದಿಂದಾಗಿರುವ ನೋವು, ದುಃಖವನ್ನು ಟ್ವಿಟರ್ನಲ್ಲಿ ತೋಡಿಕೊಂಡಿದ್ದಾರೆ ಮತ್ತು ತನ್ನ ಈ ಪೋಸ್ಟ್ ಅನ್ನು ಅವರು ಕುವೈಟ್ನಲ್ಲಿ ಭಾರತೀಯ ದೂತಾವಸಕ್ಕೂ ಟ್ಯಾಗ್ ಮಾಡಿದ್ದಾರೆ. ತಮಗೆ ವಿದೇಶಿ ನೆಲದಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂಬ ಅಳಲನ್ನು ಸಾಮಿ ಪ್ರಕಟಿಸಿದ್ದಾರೆ.
ಗಾಯಕ ಅದ್ನಾನ್ ಸಾಮಿ ಅವರು ತಮ್ಮ ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ಈ ರೀತಿಯಾಗಿ ಬರೆದಿದ್ದಾರೆ :
“ನಾವು ನಿಮ್ಮ ನಗರಕ್ಕೆ ಪ್ರೀತಿ ವಾತ್ಸಲ್ಯದಿಂದ ಬಂದಿದ್ದೆವು; ಭಾರತೀಯ ಸಹೋದರರು ನಮ್ಮನ್ನು ಪ್ರೀತಿಯಿಂದ ಆಲಂಗಿಸಿದ್ದಾರೆ. ಆದರೆ ನೀವು (ಕುವೈಟ್ ವಲಸೆ ಅಧಿಕಾರಿಗಳು) ನಮಗೆ ಯಾವುದೇ ಬೆಂಬಲ ನೀಡಿಲ್ಲ; ಬದಲಾಗಿ ನನ್ನ ತಂಡದವರನ್ನು ವಿನಾಕಾರಣವಾಗಿ ಇಂಡಿಯನ್ ಡಾಗ್ಸ್ ಎಂದು ಕರೆದಿದ್ದೀರಿ. ನಾವು ನಿಮ್ಮನ್ನು ಸಂಪರ್ಕಿಸಿದಾಗ ನೀವು ನಮಗಾಗಿ ಏನೂ ಮಾಡಲು ಮುಂದಾಗಲಿಲ್ಲ. ಈ ರೀತಿಯ ಉದ್ಧಟತನವನ್ನು ತೋರುವುದಕ್ಕೆ ಕುವೈಟಿಗರಿಗೆ ಅದೆಷ್ಟು ಧೈರ್ಯ?’
ಅದ್ನಾನ್ ಸಾಮಿ ತಂಡ ಕುವೈಟ್ನಲ್ಲಿ ಅನುಭವಿಸಿರುವ ಈ ಜನಾಂಗೀಯ ನಿಂದನೆಯ ಪ್ರಕರಣವನ್ನು ಕೇಂದ್ರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಆದಷ್ಟು ಬೇಗನೆ ನೀವು ನನ್ನನ್ನು ಸಂಪರ್ಕಿಸಬೇಕೆಂದು ಕೋರುತ್ತೇನೆ ಎಂಬುದಾಗಿ ಅವರು ಸಾಮಿಗೆ ತಿಳಿಸಿದ್ದಾರೆ. ಸುಶ್ಮಾ ತೋರಿರುವ ಸೌಜನ್ಯ ಮತ್ತು ಬೆಂಬಲಕ್ಕೆ ಸಾಮಿ ಕೃತಜ್ಞತೆ ಹೇಳಿದ್ದಾರೆ.
ಇದನ್ನು ಅನುಸರಿಸಿ ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ಅವರುಸಾಮಿ ಅವರಿಗೆ ಪತ್ರ ಬರೆದು “ನಾವು ಈ ವಿಷಯವನ್ನು ಪರಿಶೀಲಿಸುತ್ತೇನೆ’ ಎಂಬ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?