ಛತ್ತೀಸ್ಗಢ: ನಕ್ಸಲ್ ಪ್ರದೇಶದಲ್ಲಿ 14 ವರ್ಷದಿಂದ ಮುಚ್ಚಿದ್ದ 26 ಶಾಲೆ ಪುನರಾರಂಭ
Team Udayavani, Nov 21, 2019, 6:06 PM IST
ಛತ್ತೀಸ್ಗಢ: ಮಾವೋವಾದಿಗಳ ಹಿಂಸಾಚಾರದಿಂದಾಗಿ 14 ವರ್ಷಗಳಿಂದ ಮುಚ್ಚಲ್ಪಟ್ಟಿದ 26 ಶಾಲೆಗಳನ್ನು ಛತ್ತೀಸ್ಗಢ ಸರಕಾರ ಪುನರಾರಂಭಿಸಿದೆ.
ಈ ಶಾಲೆಗಳಿಗೆ 700 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ರಾಜ್ಯ ಬೆಂಬಲಿತ ಸಲ್ವಾ ಜುದಮ್ ಮಿಲಿಷಿಯಾ ಮತ್ತು ಮಾವೋದಿಗಳ ನಡುವಿನ ಹಿಂಸಾಚಾರ ತೀವ್ರ ರೂಪ ಪಡೆದುಕೊಂಡಿದ್ದರ ಪರಿಣಾಮ ಬಸ್ತಾರ್ ಪ್ರದೇಶದಲ್ಲಿ ಸರಕಾರ ಆಡಳಿತವನ್ನು ಸ್ಥಗಿತಗೊಳಿಸುವುದರೊಂದಿಗೆ 2011 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ 300 ಶಾಲೆಗಳನ್ನು ಮುಚ್ಚಿತ್ತು.
ಇದೀಗ ರಾಜ್ಯದಲ್ಲಿ ಗಲಭೆ ತೀವ್ರತೆ ಕಡಿಮೆಯಾಗಿದ್ದು, ಸ್ಥಳೀಯ ಆಡಳಿತ ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಸೇರಿ ಅಲ್ಲಿನ ಶಾಲೆಗಳನ್ನು ಪುನರಾರಂಭಿಸಿದೆ. ಶಾಲೆ ಪ್ರಾರಂಭವಾದ ದಿನದಿಂದ ಈವರೆಗೆ 700 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ
ಅತ್ಯಂತ ಸೂಕ್ಷ್ಮಮತ್ತು ದೂರದ ಹಳ್ಳಿಗಳ ಮಕ್ಕಳನ್ನು ಶಿಕ್ಷಣ ಮೂಲಕ ಮುಖ್ಯವಾಹಿಗೆ ತರಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಗ್ರಾಮಸ್ಥರ ಬೆಂಬಲದೊಂದಿಗೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಬಿಜಾಪುರ ಜಿಲ್ಲಾಧಿಕಾರಿ ಕೆ ಡಿ ಕುಂಜಮ್ ಹೇಳಿದ್ದಾರೆ.
ಬಿಸಿಯೂಟದ ಸೌಲಭ್ಯ
ಈ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸ್ಲೇಟ್ಗಳು, ಪಠ್ಯಪುಸ್ತಕಗಳು, ನೋಟ್ಬುಕ್ಗಳನ್ನು ಒದಗಿಸಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟವನ್ನೂ ನೀಡಲಾಗುತ್ತಿದೆ.
ಶಿಕ್ಷಾ ಡೂಟ್ಸ್
ಜಿಲ್ಲಾಡಳಿತವು ಸ್ಥಳೀಯ ನಿರುದ್ಯೋಗಿ ನಿವಾಸಿಗಳನ್ನು ಶಿಕ್ಷಾ ಡೂಟ್ಸ್ (ಶಿಕ್ಷಕರು) ಎಂದು ನೇಮಕ ಮಾಡಿದ್ದು, ಅವರಿಗೆ ಜಿಲ್ಲಾ ಖನಿಜ ನಿಧಿಯಿಂದ ಮಾಸಿಕ ಗೌರವ ಮೊತ್ತವನ್ನು ನೀಡಲಾಗುತ್ತಿದೆ. ಈ ಪ್ರದೇಶದ ಗಣಿಗಾರಿಕೆ ಕಂಪನಿಗಳು ಅದರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.
ಹಿಂಸಾಚಾರ ಇಳಿಮುಖ
ದಕ್ಷಿಣ ಏಷ್ಯಾ ಭಯೋತ್ಪಾದನಾ ಪೋರ್ಟಲ್ ಅಂಕಿ ಅಂಶಗಳ ಪ್ರಕಾರ, 2007 ರಲ್ಲಿ 51 ಹಿಂಸಾಚಾರ ಘಟನೆಗಳಲ್ಲಿ 98 ಭದ್ರತಾ ಪಡೆಗಳ ಸಿಬಂದಿ ಸೇರಿದಂತೆ 155 ಜನರು ಸಾವನ್ನಪ್ಪಿದ್ದು, ಬಿಜಾಪುರದಲ್ಲಿ ಹಿಂಸಾಚಾರ ಉತ್ತುಂಗಕ್ಕೇರಿತ್ತು. ತದನಂತರದಲ್ಲಿ ಈ ವರ್ಷ ಸಾವುನೋವುಗಳು ಸಂಖ್ಯೆ ಇಳಿಮುಖವಾಗಿದ್ದು, 20 ಜನರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು