2 ವರ್ಷದ ಹೋರಾಟದ ಬಳಿಕ ಸಿಕ್ಕಿದ್ದು 33 ರೂ. ಪರಿಹಾರ!
Team Udayavani, May 10, 2019, 6:00 AM IST
ಜೈಪುರ: ರೈಲು ಟಿಕೆಟ್ ರದ್ದು ಮಾಡಿದ್ದಕ್ಕೆ ಕಡಿತಗೊಳಿಸಿದ್ದ 33 ರೂ. ಹಿಂಪಡೆಯಲು ರಾಜಸ್ಥಾನ ಕೋಟಾದ ಇಂಜಿನಿಯರ್ ಒಬ್ಬರು ಎರಡು ವರ್ಷಗಳವರೆಗೆ ರೈಲ್ವೇ ಇಲಾಖೆಯ ವಿರುದ್ಧ ಹೋರಾಟ ನಡೆಸಿದ್ದಾರೆ! ಜಿಎಸ್ಟಿ ಜಾರಿಗೆ ಬರುವುದಕ್ಕೂ ಮೊದಲು ಅಂದರೆ 2017 ಜುಲೈ 1 ಕ್ಕೂ ಮೊದಲು ಕೋಟಾದಿಂದ ದಿಲ್ಲಿಗೆ ರೈಲು ಟಿಕೆಟ್ ಬುಕ್ ಮಾಡಿದ್ದ ಸುಜೀತ್ ಸ್ವಾಮಿ, ಜಿಎಸ್ಟಿ ಜಾರಿಗೆ ಬಂದ ನಂತರ ರದ್ದು ಮಾಡಿದ್ದರು. ಆದರೆ ಟಿಕೆಟ್ ದರ 765 ರೂ. ಪೈಕಿ ರದ್ದತಿ ಶುಲ್ಕ 65 ರೂ. ಕಡಿತಗೊಳಿಸು ವುದರ ಬದಲಿಗೆ ಇಲಾಖೆ 100 ರೂ. ಕಡಿತಗೊಳಿಸಿತ್ತು. ಇದರ ವಿರುದ್ಧ ನಡೆಸಿದ ಹೋರಾಟ ಅವರಿಗೆ ಫಲ ನೀಡಿದೆ. ಇಲಾಖೆ 35 ರೂ. ಕೊಡಬೇಕಿತ್ತಾದರೂ 33 ರೂ. ಮಾತ್ರ ವಾಪಸ್ ಮಾಡಿದೆ. ಹೀಗಾಗಿ ಈ 2 ರೂ.ಗೆ ಹೋರಾಟ ಮುಂದು ವರಿಸುವು ದಾಗಿ ಹೇಳಿದ್ದಾರೆ. ಇದೇ ರೀತಿ 9 ಲಕ್ಷ ಮಂದಿಗೆ ಇಲಾಖೆ ಹೆಚ್ಚುವರಿ ಕಡಿತ ಗೊಳಿಸಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ