ಕಾನ್ಶಿರಾಮ್ ಸ್ಮಾರಕವಾಗಿ ಮಾಯಾವತಿ ನಿವಾಸ ಬದಲು
Team Udayavani, May 22, 2018, 6:00 AM IST
ಲಕ್ನೋ: ಉತ್ತರ ಪ್ರದೇಶದ ಮಾಜಿ ಸಿಎಂಗಳು ಸರ್ಕಾರಿ ಬಂಗಲೆ ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮಾಯಾವತಿ ಮತ್ತು ಅಖೀಲೇಶ್ ಯಾದವ್ ಇನ್ನೂ ಅದೇ ಬಂಗಲೆಗಳಲ್ಲಿ ಉಳಿದುಕೊಂಡಿದ್ದಾರೆ.
ಬಹುಜನ ಸಮಾಜ ಪಕ್ಷವು ಮಾಯಾವತಿ ಅವರು ವಾಸಿಸುತ್ತಿರುವ ಅಧಿಕೃತ ಬಂಗಲೆಯನ್ನು ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ರ ಸ್ಮಾರಕ ಎಂದು ಘೋಷಿಸಿದೆ. ಬಂಗಲೆ ಮುಂದೆ ಒಂದು ಬೋರ್ಡ್ ಅನ್ನೂ ಹಾಕಲಾಗಿದೆ. ಇದೇ ವೇಳೆ, ಮಾಯಾ ಅವರು ಹೊಸ ಬಂಗಲೆಗೆ ವಾಸ್ತವ್ಯ ಬದಲಿಸಿಕೊಳ್ಳಲು ಮುಂದಾಗಿ ದ್ದಾರೆ. 2010ರಲ್ಲಿ ಖರೀದಿಸಿದ್ದ 15 ಕೋಟಿ ರೂ. ಮೌಲ್ಯದ ಬಂಗಲೆಯಲ್ಲಿ ವಾಸಿಸಲಿದ್ದಾರೆ. .
ಇನ್ನು ಅಖೀಲೇಶ್ ಯಾದವ್ ತಮಗಿರುವ ಭದ್ರತಾ ವ್ಯವಸ್ಥೆಯಿಂದಾಗಿ ಹಾಲಿ ಮನೆ ತೆರವಿಗೆ 2 ವರ್ಷಗಳ ಸಮಯ ಬೇಕೆಂದು ಕೋರಿದ್ದಾರೆ. ಈ ಬಗ್ಗೆ ಉ.ಪ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಝೆಡ್ ಪ್ಲಸ್ ಮತ್ತು ಎನ್ಎಸ್ಜಿ ಭದ್ರತೆ ಇರುವುದರಿಂದ ಅವರಿಗೂ ಸೂಕ್ತ ವ್ಯವಸ್ಥೆ, ಸ್ಥಳಾವಕಾಶ ಬೇಕು ಎಂದು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ