1950ರ ನಂತರ ಮಳೆಗೆ 69 ಸಾವಿರ ಮಂದಿ ಬಲಿ
Team Udayavani, Oct 6, 2017, 11:59 AM IST
ನವದೆಹಲಿ: ಸ್ವಾತಂತ್ರ್ಯಾ ನಂತರದಲ್ಲಿ ಮಧ್ಯ ಭಾರತ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. 1950 ರಿಂದ ಇಲ್ಲಿವರೆಗಿನ ಕೇಸ್ ಸ್ಟಡಿ ನಡೆಸಿರುವ ಭಾರತ, ಅಮೆರಿಕ ಮತ್ತು ಫ್ರಾನ್ಸ್ನ ಹವಾಮಾನ ತಜ್ಞರು ಈ ವಿಷಯ ಬಹಿರಂಗಪಡಿಸಿದ್ದು ಇಲ್ಲಿವರೆಗೆ ಸುಮಾರು 69 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇದಷ್ಟೇ ಅಲ್ಲ ಸುಮಾರು 1.70 ಕೋಟಿ ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದೂ ಹೇಳಿದ್ದಾರೆ.
ಮಳೆಯಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳೆಂದರೆ ಉತ್ತರ ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ಗಡ, ತೆಲಂಗಾಣದ, ಗೋವಾ ಮತ್ತು ದಕ್ಷಿಣ ಕೇರಳ ಎಂದು ನೇಚರ್ ಕಮ್ಯೂನಿಕೇಶನ್ ಎಂಬ ಪತ್ರಿಕೆಯಲ್ಲಿ ಬರೆದಿದ್ದಾರೆ. 1950 ರಿಂದ 2015ರ ವರೆಗೆ ದೇಶದಲ್ಲಿ 268 ಪ್ರವಾಹ ಪ್ರಕರಣಗಳಾಗಿವೆ.
ಇದರಿಂದಾಗಿ 8.25 ಕೋಟಿ ಮಂದಿಗೆ ಇದರ ಬಿಸಿ ತಟ್ಟಿದ್ದರೆ, 1.70 ಕೋಟಿ ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೆ, ಈ ಪ್ರವಾಹಗಳಿಂದಾಗಿ ಭಾರತ ಸುಮಾರು 3 ಶತಕೋಟಿ ಡಾಲರ್ ಹಣ ಕಳೆದುಕೊಂಡಿದೆ ಎಂದಿದೆ. ಅಂದರೆ ಜಗತ್ತಿನ ಆರ್ಥಿಕತೆಯ ಶೇ.10 ರಷ್ಟು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ