ಫೋನ್ ಟ್ಯಾಪಿಂಗ್, ಥರ್ಡ್ ಡಿಗ್ರಿ ಶಿಕ್ಷೆ ಹಳೇದಾಯ್ತು: ಶಾ
Team Udayavani, Aug 29, 2019, 5:50 AM IST
ಹೊಸದಿಲ್ಲಿ: ಬದಲಾದ ಕಾಲಘಟ್ಟದಲ್ಲಿ ಆರೋಪಿಗಳಿಂದ ಸತ್ಯವನ್ನು ಬಾಯಿಬಿಡಿಸುವ ಹೊಸ ತಂತ್ರಗಾರಿಕೆ ರೂಪುಗೊಳ್ಳಬೇಕು ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರದ ತನಿಖಾ ಸಂಸ್ಥೆಗಳಲ್ಲಿ ಹೊಸ ತಂತ್ರಗಾರಿಕೆಗಳನ್ನು ಅಳವಡಿಸಿಕೊಳ್ಳಲು ಸಿಆರ್ಪಿಸಿ ಹಾಗೂ ಐಪಿಸಿ ದಂಡ ಸಂಹಿತೆಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದಿದ್ದಾರೆ. ಅವರ ಮಾತುಗಳು, ಪೊಲೀಸರು ಹಾಗೂ ವಿವಿಧ ತನಿಖಾ ಸಂಸ್ಥೆಗಳ ತನಿಖಾ ಕಾರ್ಯವೈಖರಿಯಲ್ಲಿ ಗಣನೀಯ ಬದಲಾವಣೆ ತರುವ ಮುನ್ಸೂಚನೆ ನೀಡಿದಂತಾಗಿದೆ.
ಬುಧವಾರ, ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ 49ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಆರೋಪಿಗಳಿಂದ ಸತ್ಯ ಬಾಯಿಬಿಡಿಸಲು, ಪೊಲೀಸರು ಬಳಸುವ ಶಿಕ್ಷೆಗಳು ಅಥವಾ ಟೆಲಿಫೋನ್ ಟ್ಯಾಪಿಂಗ್ನಂಥ ಉಪಾಯಗಳು ತುಂಬಾ ಹಿಂದಿನ ಕಾಲದ ತಂತ್ರಗಾರಿಕೆಗಳಾಗಿವೆ. ಈಗಿನ ಕಾಲದಲ್ಲಿ ವಿಧಿವಿಜ್ಞಾನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿದರೆ ಸಾಕು, ನೈಜ ಅಪರಾಧಿಗಳನ್ನು ಅಥವಾ ಸತ್ಯಗಳನ್ನು ಪತ್ತೆ ಹಚ್ಚಬಹುದು. ಅಂಥ ಹೊಸ ಹಾಗೂ ಖಚಿತ ಫಲಿತಾಂಶ ನೀಡುವಂಥ ತಂತ್ರಗಾರಿಕೆಗಳು ಎಲ್ಲಾ ರಾಜ್ಯಗಳ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳ ಮಟ್ಟದಲ್ಲಿ ರೂಪುಗೊಳ್ಳಬೇಕು’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ
Bhopal: ಅಜ್ಜಿಗೆ ಮನಬಂದಂತೆ ಥಳಿಸಿದ ದಂಪತಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು