ಉಗ್ರರ ವಿಧ್ವಂಸಕ ಸಂಚು ವಿಫ‌ಲ


Team Udayavani, Aug 7, 2018, 6:00 AM IST

29.jpg

ಹೊಸದಿಲ್ಲಿ: ಸ್ವಾತಂತ್ರ್ಯ ದಿನ ದಿಲ್ಲಿ ಸಹಿತ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲು ಸಜ್ಜಾಗಿದ್ದ ಉಗ್ರರ ಹೆಡೆಮುರಿ ಕಟ್ಟಿರುವ ಭದ್ರತಾ ಪಡೆಗಳು ಇಬ್ಬರನ್ನು ಬಂಧಿಸಿವೆ. ಜಮ್ಮು-ಕಾಶ್ಮೀರದಲ್ಲಿ ಅನ್ಸಾರ್‌ ಘಝಾತ್‌-ಉಲ್‌-ಹಿಂದ್‌ ಎಂಬ ಉಗ್ರ ಸಂಘಟನೆಯ ಇರ್ಫಾನ್‌ ಹುಸೇನ್‌ ವಾನಿ ಮತ್ತು ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾದ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ಅಲಿಯಾಸ್‌ ಹಬೀಬ್‌ನನ್ನು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಅಲ್‌ ಕಾಯಿದಾ ಜತೆಗೆ ಗುರುತಿಸಿಕೊಂಡ ಅನ್ಸಾರ್‌ ಘಝಾತ್‌-ಉಲ್‌-ಹಿಂದ್‌ ಎಂಬ ಸಂಘಟನೆಯ ಇರ್ಫಾನ್‌ ಹುಸೇನ್‌ ವಾನಿ ಯನ್ನು ಬಂಧಿಸಿ ಎಂಟು ಗ್ರೆನೇಡ್‌, 60 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಆತ ದಿಲ್ಲಿಯಲ್ಲಿ ಗ್ರೆನೇಡ್‌ಗಳನ್ನು ಹಸ್ತಾಂತರಿಸುವವನಿದ್ದ. ಬಿ.ಎ. ಪದವಿ ಓದುತ್ತಿದ್ದಾತ ಉಗ್ರ ಸಂಘಟನೆಯತ್ತ ಆಕರ್ಷಿತನಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಐಜಿಪಿ ಎಸ್‌.ಡಿ.ಎಸ್‌. ಜಮಾÌಲ್‌ ತಿಳಿಸಿದ್ದಾರೆ. ಈತ ದಿಲ್ಲಿಯಲ್ಲಿ ಆ. 15ರ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳನ್ನು ಹಾಳು ಮಾಡುವ ದುರುದ್ದೇಶ ಹೊಂದಿದ್ದ ಎನ್ನಲಾಗಿದೆ.  

ಹಣಕಾಸಿನ ನೆರವು ನೀಡುತ್ತಿದ್ದವರ ಬಂಧನ
ಮೂಲತಃ ಒಡಿಶಾದ ಕೇಂದ್ರಪಾರ ಜಿಲ್ಲೆಯ ರೆಹಮಾನ್‌ ಸದ್ಯ ರಿಯಾದ್‌ನ ನಿವಾಸಿ. ಈತ 2007ರಲ್ಲಿ ಪೊಲೀಸರ ವಶದಿಂದ ಪರಾರಿ ಯಾಗಿದ್ದ ಶೇಖ್‌ ಅಬ್ದುಲ್‌ ನಯೀಮ್‌ ಅಲಿಯಾಸ್‌ ನೋಮಿ ಎಂಬಾತನ ನಿಕಟವರ್ತಿ ಯಾಗಿದ್ದ. ಬಾಂಗ್ಲಾದೇಶ ಮೂಲಕ ಇಬ್ಬರು ಪಾಕಿ ಸ್ಥಾನೀಯರು, ಓರ್ವ ಕಾಶ್ಮೀರಿಯನ್ನು ಭಾರತದೊಳಕ್ಕೆ ನುಸುಳಿಸಲು ಕುಮ್ಮಕ್ಕು ನೀಡುತ್ತಿದ್ದ ಹಿನ್ನೆಲೆಯಲ್ಲಿ ನೋಮಿಯನ್ನು ಬಂಧಿಸಲಾಗಿತ್ತು. ನೋಮಿಗೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಹಣಕಾಸಿನ ನೆರವು, ಅಡಗುದಾಣ ಒದಗಿಸಿದ್ದ ಎಂದು ಎನ್‌ಐಎ ಆರೋಪಿಸಿದೆ. ಪಾಕಿಸ್ಥಾನದ ಲಷ್ಕರ್‌ ಉಗ್ರ ಅಜ್ಮದ್‌ ಅಲಿಯಾಸ್‌ ರೆಹಾನ್‌ನ ಸೂಚನೆಯನ್ನು ಪಾಲಿಸುತ್ತಿದ್ದ.

ಕೇರಳದಲ್ಲಿ ಇಬ್ಬರ ಬಂಧನ
ಕಳೆದ ಜನವರಿಯಲ್ಲಿ ಬಿಹಾರದ ಬೋಧ್‌ಗಯಾದಲ್ಲಿರುವ ಮಹಾ ಬೋಧಿ ದೇಗುಲದಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಇರಿಸಿದ ಆರೋಪ  ಸಂಬಂಧ ಎನ್‌ಐಎ ಕೇರಳದಲ್ಲಿ ಪಶ್ಚಿಮ ಬಂಗಾಲದ ಇಬ್ಬರನ್ನು ಬಂಧಿಸಿದೆ. ಅವರಿಬ್ಬರು ಬಾಂಗ್ಲಾದೇಶ ಮತ್ತು ಭಾರತದ ಗಡಿ ಭಾಗದ ಜಮಾತ್‌-ಉಲ್‌- ಮುಜಾಹಿದೀನ್‌ ಬಾಂಗ್ಲಾ ದೇಶ್‌ ಎಂಬ ಸಂಘಟನೆಗೆ ಸೇರಿದವರು.

ಜೈಶ್‌ ಉಗ್ರನ ಸೆರೆ
ಮತ್ತೂಂದು ಬೆಳವಣಿಗೆಯಲ್ಲಿ, ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಮುಜಮ್ಮಿಲ್‌ ಅಹ್ಮದ್‌ ದರ್‌(22)ನನ್ನು ಪೊಲೀಸರು ಬಂಧಿಸಿ ಭಾರೀ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಉಗ್ರ ಕೃತ್ಯ ಎಸಗುವ ಉದ್ದೇಶ ಈತನಿಗಿ ದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಹ್ಯಾಂಡ್‌ ಗ್ರೆನೇಡ್‌ಗಳು, ಐಇಡಿ, ಚೈನೀಸ್‌ ಗ್ರೆನೇಡ್‌, ಡಿಟೋನೇಟರ್‌ಗಳು, ಮೊಬೈಲ್‌ ಹಾಗೂ ಇತರ ಸ್ಫೋಟಕಗಳು ಈತನ ಬಳಿಯಿದ್ದವು. ಈತ ಜೈಶ್‌ನ ಇತರ ಉಗ್ರರೊಂದಿಗೆ ಸತತ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.