ಮುಂದಿನ ಜೂನ್ನಲ್ಲಿ ಏರ್ ಇಂಡಿಯಾ ಬಂದ್?
Team Udayavani, Dec 30, 2019, 9:38 PM IST
ಮಾರಾಟವಾಗದಿದ್ದರೆ, ಆರ್ಥಿಕ ಪ್ಯಾಕೇಜ್ ಸಿಗದಿದ್ದರೆ ಲಾಕ್ಔಟ್ ಸಾಧ್ಯತೆ
– 60,000 ಕೋಟಿ ರೂ. ಸಾಲ ಹೊತ್ತಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆ
– 2011-12ರಿಂದ ಈವರೆಗೆ ಸಂಸ್ಥೆಗೆ 30,520.21 ಕೋಟಿ ರೂ. ಸಹಾಯ
– ಮತ್ತಷ್ಟು ಆರ್ಥಿಕ ಪ್ಯಾಕೇಜ್ ನೀಡುವ ಸ್ಥಿತಿಯಲ್ಲಿ ಇಲ್ಲದ ಕೇಂದ್ರ ಸರ್ಕಾರ
– ಪರಭಾರೆ ಹಾಗೂ ಬಂಡವಾಳ ಹಿಂತಗೆತವೇ ಪ್ರಮುಖ ದಾಳವಾಗಿಸಿರುವ ಸರ್ಕಾರ
ನವದೆಹಲಿ: ತೀವ್ರ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಸದ್ಯದಲ್ಲೇ ಯಾರೂ ಕೊಳ್ಳಲು ಮುಂದೆ ಬಾರದಿದ್ದರೆ ಅಥವಾ ಸರ್ಕಾರದಿಂದ ಮತ್ತಷ್ಟು ಆರ್ಥಿಕ ಪರಿಹಾರದ ಪ್ಯಾಕೇಜ್ಗಳು ಲಭ್ಯವಾಗದಿದ್ದರೆ ಮುಂದಿನ ಜೂನ್ ಹೊತ್ತಿಗೆ ಆ ಸಂಸ್ಥೆ ಶಾಶ್ವತವಾಗಿ ಮುಚ್ಚಿಹೋಗಲಿದೆ ಎಂದು ಅದೇ ಸಂಸ್ಥೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ತಲೆಯ ಮೇಲೆ ಸದ್ಯಕ್ಕೆ 60,000 ಕೋಟಿ ರೂ.ಗಳನ್ನು ಹೊತ್ತುಕೊಂಡಿರುವ ಏರ್ ಇಂಡಿಯಾ ಸಂಸ್ಥೆಗೆ ಪುನಶ್ಚೇತನ ನೀಡಲು ಹಾಗೂ ಅದನ್ನು ಪರಭಾರೆ ಮಾಡುವ ನಿರಂತರ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ತಲ್ಲೀನವಾಗಿದೆ. ಈ ಪ್ರಕ್ರಿಯೆಗಳನ್ನು ಸರಾಗವಾಗಿ ನಡೆಸಲು ಸಂಸ್ಥೆಯಲ್ಲಿ ತಾನು ಹೊಂದಿದ್ದ ಬಂಡವಾಳ ಹಿಂಪಡೆತಕ್ಕೂ ಕೈ ಹಾಕಿದೆ. ಆದರೂ, ಸಂಸ್ಥೆಯನ್ನು ಖರೀದಿಸಲು ಬೇರ್ಯಾವುದೇ ಕಂಪನಿ ಆಸಕ್ತಿ ವಹಿಸುತ್ತಿಲ್ಲವಾದ್ದರಿಂದ ಸದ್ಯದ ಮಟ್ಟಿನ ಚೇತರಿಕೆಗಾಗಿ ಆರ್ಥಿಕ ಪ್ಯಾಕೇಜ್ಗಳು ಅಥವಾ ಮತ್ಯಾವುದೇ ವಿತ್ತೀಯ ಅನುಕೂಲತೆಗಳು ಸಂಸ್ಥೆಗೆ ಸಿಗಲೇಬೇಕಿದೆ. ಅಷ್ಟು ಸಿಕ್ಕಿದರೂ, ಈಗಾಗಲೇ ಹಾರಾಟ ನಿಲ್ಲಿಸಿರುವ ಕಂಪನಿಯ 12 ವಿಮಾನಗಳನ್ನು ಮತ್ತೆ ಸೇವೆಗೆ ಸಜ್ಜುಗೊಳಿಸಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ, 2011-12ರಿಂದ 2019ರ ಡಿಸೆಂಬರ್ವರೆಗೂ ಸಂಸ್ಥೆಯ ಅನುಕೂಲಕ್ಕಾಗಿ 30,520.21 ಕೋಟಿ ರೂ.ಗಳಷ್ಟು ಹಣವನ್ನು ನೀಡಿದೆ. ಈಗ, ಮತ್ತಷ್ಟು ಆರ್ಥಿಕ ಪ್ಯಾಕೇಜ್ಗಳನ್ನು ನೀಡುವ ಸ್ಥಿತಿಯಲ್ಲಿ ಕೇಂದ್ರವೂ ಇಲ್ಲ. ಹಾಗಾಗಿ, ಬೇರೆ ರೀತಿಯ ಆರ್ಥಿಕ ಅನುಕೂಲಗಳು ಸಿಕ್ಕರೂ ಸಾಕು ಏರ್ ಇಂಡಿಯಾ ಕೊಂಚವಾದರೂ ಚಿಗುರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಂಥ ಪ್ಯಾಕೇಜ್ಗಳು ಸಿಗದಿದ್ದರೆ 25 ವರ್ಷಗಳ ಕಾಲ ಸತತ ಸೇವೆ ನೀಡಿ ಈಗ ನೇಪಥ್ಯಕ್ಕೆ ಸರಿದ ಜೆಟ್ ಏರ್ವೆàಸ್ ಸಂಸ್ಥೆಯ ಸಾಲಿಗೆ ಏರ್ ಇಂಡಿಯಾ ಕೂಡ ಸೇರ್ಪಡೆಯಾಗುವುದು ಖಾತ್ರಿ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ