ಗಣ್ಯರಿಗೆ 2 ಸುಸಜ್ಜಿತ ವಿಮಾನ ; ಬೋಯಿಂಗ್ ಸಂಸ್ಥೆಯಿಂದ ಸೆಪ್ಟಂಬರ್ಗೆ ಹಸ್ತಾಂತರ
Team Udayavani, Jun 10, 2020, 12:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕಾಗಿ ಎರಡು ಅತ್ಯಾಧುನಿಕ, ವೈಭವೋಪೇತ, ಸರ್ವ ಸುಸಜ್ಜಿತ ವಿಮಾನಗಳನ್ನು ಬೋಯಿಂಗ್ ವಿಮಾನ ಸಂಸ್ಥೆ ಸಿದ್ಧಗೊಳಿಸಿದ್ದು, ಇದೇ ಆಗಸ್ಟ್ -ಸೆಪ್ಟಂಬರ್ನಲ್ಲಿ ಅವು ಭಾರತಕ್ಕೆ ಹಸ್ತಾಂತರಗೊಳ್ಳಲಿವೆ.
ಈ ಮೂವರು ಗಣ್ಯಾತಿ ಗಣ್ಯರ ಸೇವೆಗಾಗಿಯೇ ಸಿದ್ಧಗೊಂಡಿರುವ ‘ಬೋಯಿಂಗ್ 777 – 300 ಇಆರ್ ವಿವಿಐಪಿ’ ವಿಮಾನಗಳಾಗಿದ್ದು, ಇವುಗಳ ಮೇಲೆ “ಏರ್ ಇಂಡಿ ಯಾ ಒನ್’ ಎಂದು ಬೃಹದಾಕಾರವಾಗಿ ಬರೆಯಲಾಗುತ್ತದೆ.
ಅಗತ್ಯಕ್ಕೆ ತಕ್ಕಂತೆ ವಿನ್ಯಾಸ: ಅಸಲಿಗೆ, ಈ ವಿಮಾನಗಳನ್ನು 2018ರಲ್ಲೇ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದರೆ, ವಿವಿಐಪಿಗಳ ಪ್ರಯಾಣಕ್ಕೆ ತಕ್ಕಂತೆ ಇದನ್ನು ಮತ್ತಷ್ಟು ಬದಲಾಯಿಸುವಂತೆ ಕೋರಿದ್ದ ಭಾರತ, ಈ ನಿಟ್ಟಿನಲ್ಲಿ ತನಗೆ ಬೇಕಾದ ಸೌಕರ್ಯಗಳ ಪಟ್ಟಿಯನ್ನು ಬೋಯಿಂಗ್ ಸಂಸ್ಥೆಗೆ ನೀಡಿತ್ತು.
ಹಾಗಾಗಿ, ಭಾರತದ ಆಶಯದಂತೆಯೇ ಆ ವಿಮಾನಗಳನ್ನು ಒಳಸ್ವರೂಪ, ಸೌಲಭ್ಯಗಳಲ್ಲಿ ಗಣನೀಯ ಬದಲಾವಣೆ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಅವನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ವಿಮಾನಗಳು ಇದೇ ತಿಂಗಳಲ್ಲಿ ಭಾರತಕ್ಕೆ ಹಸ್ತಾಂತರಗೊಳ್ಳಬೇಕಿತ್ತು. ಆದರೆ, ಕೋವಿಡ್ ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ, ಇವು ಆಗಸ್ಟ್ ಅಥವಾ ಸೆಪ್ಟಂಬರ್ನಲ್ಲಿ ಹಸ್ತಾಂತರಗೊಳ್ಳಲಿವೆ.
ವಿಶೇಷವೇನು?
ಈ ವಿಮಾನಗಳಲ್ಲಿ ‘ಲಾರ್ಜ್ ಏರ್ಕ್ರಾಫ್ಟ್ ಇನ್ಫ್ರಾರೆಡ್ ಕೌಂಟರ್ವೆುಷರ್ಸ್’ (ಎಲ್ಎಐಆರ್ಸಿಎಂ) ಎಂಬ ಕ್ಷಿಪಣಿ ನಿಗ್ರಹ ತಂತ್ರಜ್ಞಾನ ವ್ಯವಸ್ಥೆಯಿರಲಿದೆ. ಇದರ ಜೊತೆಗೆ, ಸ್ವಯಂ ರಕ್ಷಣೆ ಸೂಟ್ಸ್ (ಎಸ್ಪಿಎಸ್) ವ್ಯವಸ್ಥೆಯೂ ಇರುತ್ತದೆ. ಪ್ರತಿ ವಿಮಾನಕ್ಕೆ 1,400 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವಿಮಾನಗಳನ್ನು ಭಾರತೀಯ ವಾಯುಪಡೆಯ ಪೈಲಟ್ಗಳು ಮಾತ್ರ ಚಲಾಯಿಸಲಿದ್ದು, ಈ ವಿಮಾನದ ನಿರ್ವಹಣೆಯನ್ನು ಏರ್ಇಂಡಿಯಾ ಇಂಜಿನಿಯರಿಂಗ್ ಸರ್ವೀಸಸ್ ಸಂಸ್ಥೆ ವಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ