ಐಎಎಫ್ ಏರ್ ಮಾರ್ಶಲ್ ನಿವೃತ್ತಿ: ಉಚ್ಚಾಟನೆ ಎಂದ ಪಾಕ್ ಮಾಧ್ಯಮ
Team Udayavani, Mar 2, 2019, 7:11 AM IST
ಹೊಸದಿಲ್ಲಿ : ಭಾರತದ ವಿರುದ್ಧ ಪಾಕ್ ಮಾಧ್ಯಮಗಳು ಸುಳ್ಳು ಸುಳ್ಳನ್ನೇ ವರದಿ ಮಾಡುತ್ತಿರುವುದಕ್ಕೆ ಹಲವಾರು ನಿದರ್ಶನಗಳು ಈಚಿನ ದಿನಗಳಲ್ಲಿ ಸಿಕ್ಕಿವೆ. ಈ ಸರಣಿಯಲ್ಲಿ ಹೊಸ ನಿದರ್ಶನವಾಗಿ ಕಳೆದ ಫೆ.28ರಂದು 39 ವರ್ಷಗಳ ಸುದೀರ್ಘ ಸೇವೆಯ ಬಳಿಕ ನಿವೃತ್ತರಾಗಿದ್ದ ಭಾರತೀಯ ವಾಯು ಪಡೆಯ ಏರ್ ಮಾರ್ಶಲ್ ಚಂದ್ರಶೇಖರನ್ ಹರಿ ಕುಮಾರ್ ಅವರನ್ನು ಭಾರತ ಸರಕಾರ ಸೇವೆಯಿಂದ ಉಚ್ಚಾಟಿಸಿದೆ ಎಂಬ ಸುಳ್ಳು ವರದಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದವು; ಅನಂತರ ಸತ್ಯಾಂಶ ತಿಳಿದ ಪಾಕ್ ಮಾಧ್ಯಮಗಳು ಇಂಗು ತಿಂದು ಮಂಗನಂತಾದವು.
”ಪಾಕ್ ವಾಯು ದಾಳಿಗೆ ನಲುಗಿ ಭಾರತ ತನ್ನ 2 ಫೈಟರ್ ಜೆಟ್ ಗಳನ್ನು ಕಳೆದುಕೊಂಡು ಓರ್ವ ಪೈಲಟ್ ಸೆರೆಯಾಗಿರುವುದಕ್ಕಾಗಿ ಭಾರತ ಸರಕಾರ ಏರ್ ಮಾರ್ಶಲ್ ಹರಿ ಕುಮಾರ್ ಅವರನ್ನು ಉಚ್ಚಾಟಿಸಿದೆ” ಎಂದು ಪಾಕಿಸ್ಥಾನದ “ದ ನ್ಯೂಸ್ ಇಂಟರ್ ನ್ಯಾಶನಲ್ ಮೊದಲಾಗಿ ಪ್ರಕಟಿಸಿತ್ತು. ಪಾಕಿಸ್ಥಾನದ ಹೆಚ್ಚಿನೆಲ್ಲ ಪತ್ರಿಕೆಗಳು, ನ್ಯೂಸ ವೆಬ್ ಪೋರ್ಟಲ್ ಗಳು ಈ ಸುಳ್ಳನ್ನೇ ಅನುಸರಿಸಿ ವರದಿ ಮಾಡಿದವು.
ಅದಾಗಿ ಭಾರತೀಯ ವಾಯು ಪಡೆ ಹೊರಡಿಸಿದ ತನ್ನ ಅಧಿಕೃತ ಹೇಳಿಕೆಯಲ್ಲಿ, 39 ವರ್ಷ ಸಾಧನಶೀಲ ಸೇವೆಸಲ್ಲಿಸಿದ ಏರ್ ಮಾರ್ಶಲ್ ಹರಿ ಕುಮಾರ್ ಅವರು ಫೆ.28ರಂದು ನಿವೃತ್ತರಾಗಿದ್ದಾರೆ ಎಂದು ತಿಳಿಸಿತು.
ಭಾರತೀಯ ವಾಯು ಪಡೆಗೆ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಸಿ ಎಚ್ ಕುಮಾರ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯುಸೇನಾ ಪದಕ, ವಿಶಿಷ್ಟ ಸೇವಾ ಪದಕ ಲಭಿಸಿತ್ತಲ್ಲದೆ ಅವರನ್ನು 2017ರ ಜನವರಿ 1ರಂದು ರಾಷ್ಟ್ರಪತಿಗಳ ಗೌರವ ಏರ್ ಫೋರ್ಸ್ ಎಡಿಸಿಯಾಗಿ ನೇಮಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ