ಪೈಲಟ್ಗಳಿಂದಲೇ ಗಗನಯಾನ
Team Udayavani, Jan 19, 2019, 12:30 AM IST
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಡೆಸಲಿರುವ ಮಹತ್ವಾ ಕಾಂಕ್ಷೆಯ ಗಗನಯಾನಕ್ಕೆ ಈ ಬಾರಿ ಪೈಲಟ್ಗಳೇ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಉತ್ತಮ ಹಾರಾಟ ಅನುಭವ ಹೊಂದಿರುವವರನ್ನು ನಾವು ಹುಡುಕುತ್ತಿ ದ್ದೇವೆ ಎಂದು ಇಸ್ರೋ ವಿಜ್ಞಾನಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಈ ಬಗ್ಗೆ ಮಾಹಿತಿ ನೀಡಿದ್ದ ಇಸ್ರೋ ಅಧ್ಯಕ್ಷ ಕೆ.ಸಿವನ್, ಭಾರತೀಯ ವಾಯುಪಡೆ ಹಾಗೂ ಇತರ ಏಜೆನ್ಸಿಗಳ ಸಹಭಾಗಿತ್ವದಲ್ಲಿ ಗಗನ ಯಾತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಡಿಆರ್ಡಿಒ ಕೂಡ ಮಹತ್ವದ ಪಾತ್ರ ವಹಿಸುವ ಸಾಧ್ಯತೆಯಿದೆ.
2020ರ ವೇಳೆಗೆ ಮೊದಲ ಬಾರಿಗೆ ಮಾನವ ರಹಿತ ಗಗನಯಾನ ನಡೆಸಲು ನಿರ್ಧರಿಸಲಾಗಿದ್ದು, 2021ರಲ್ಲಿ ಎರಡನೇ ಮಾನವ ರಹಿತ ಗಗನಯಾನವೂ ಯಶಸ್ವಿಯಾದರೆ, ಅದೇ ವರ್ಷ ಡಿಸೆಂಬರ್ನಲ್ಲಿ ಮಾನವ ಸಹಿತ ಗಗನಯಾನ ನಡೆಸಲು ನಿರ್ಧರಿಸಲಾಗಿದೆ. 2022ರ ವೇಳೆಗೆ ಗಗನಯಾನ ನಡೆಸುವ ಬಗ್ಗೆ ಕೆಲವೇ ತಿಂಗಳುಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಚೀನಾಕ್ಕಿಂತ ನಾವೇನೂ ಕಡಿಮೆಯಿಲ್ಲ: ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾಕ್ಕಿಂತ ಭಾರತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಿವನ್ ಹೇಳಿದ್ದಾರೆ. ಅದರಲ್ಲೂ ಗಗನಯಾನ ನಡೆಸಿದ ನಂತರ ನಾವು ಚೀನಾಗೆ ಈ ವಿಚಾರದಲ್ಲಿ ಸಮಾನವಾಗಲಿದ್ದೇವೆ. ಚೀನಾ ಇತ್ತೀಚೆಗಷ್ಟೇ ಚೇಂಜ್ 4 ನೌಕೆಯನ್ನು ಚಂದ್ರನ ಮೇಲೆ ಇಳಿಸಿದೆ. ಭಾರತ ಕೂಡ ಚಂದ್ರಯಾನ 2 ನಡೆಸಲು ನಿರ್ಧರಿಸಿದೆ. ಕಳೆದ ವರ್ಷವೇ ಚಂದ್ರಯಾನ ನಡೆಸಲು ನಿರ್ಧರಿಸಲಾಗಿತ್ತಾದರೂ, ಈ ವರ್ಷಕ್ಕೆ ಇದನ್ನು ಮುಂದೂಡಲಾಗಿತ್ತು. ಉಡಾವಣಾ ವಾಹಕಗಳ ವಿಚಾರದಲ್ಲಿ ಭಾರತ ಕೂಡ ಚೀನಾಗೆ ಸರಿಸಮನಾಗಿದೆ. ಆದರೆ ಚೀನಾ ಮಾನವ ಸಹಿತ ಗಗನಯಾನ ನಡೆಸುವ ಸಾಮರ್ಥ್ಯವೊಂದರಲ್ಲಿ ಅವರು ಮುಂದಿದ್ದಾರೆ. 2003ರಲ್ಲಿ ಚೀನಾ ಗಗನಯಾನ ನಡೆಸಿದೆ ಎಂದು ಸಿವನ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ತರಬೇತಿ: ಉಪಗ್ರಹ ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಸೇರಿದಂತೆ ಸ್ಯಾಟಲೈಟ್ ಬಗ್ಗೆ ಸಮಗ್ರ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಇಸ್ರೋ ನಿರ್ಧರಿಸಿದೆ. ಇದಕ್ಕಾಗಿ 100 ವಿದ್ಯಾರ್ಥಿಗಳನ್ನು ಇಸ್ರೋ ಆಯ್ಕೆ ಮಾಡಲಿದೆ. ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಯುವಕರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಇಸ್ರೋ ಈ ಕ್ರಮಕ್ಕೆ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…