ಇತರೆ ರಾಷ್ಟ್ರಗಳ ಜತೆ ತಾಂತ್ರಿಕ ಸಂಬಂಧ ವಿಸ್ತಾರಕ್ಕೆ ಇಂಗಿತ
Team Udayavani, Oct 5, 2019, 4:02 AM IST
ಹೊಸದಿಲ್ಲಿ: ಹಿಂದೂ ಮಹಾಸಾಗರ ವ್ಯಾಪ್ತಿಯ ರಾಷ್ಟ್ರಗಳ ಜತೆಗಿನ ಬಾಂಧವ್ಯವನ್ನು ದೃಢಗೊಳಿಸಲು ಕೇಂದ್ರ ಸರಕಾರ ಹೊಸ ಯೋಜನೆ ಮುಂದಿಟ್ಟಿದೆ. ಭಾರತ ಹೊಂದಿರುವ ತಾಂತ್ರಿಕ ಮತ್ತು ಇತರ ಸೇನಾ ಅಂಶಗಳನ್ನು ಇತರ ರಾಷ್ಟ್ರಗಳ ಜತೆಗೆ ಹಂಚಿಕೊಳ್ಳಲು ಮುಂದಾಗಿದೆ.
ಪಣಜಿಯಲ್ಲಿ 10 ರಾಷ್ಟ್ರಗಳ ನೌಕಾಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದ 2ನೇ ಗೋವಾ ಕಡಲು ರಕ್ಷಣೆಯ ಸಮ್ಮೇಳನದಲ್ಲಿ ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಈ ಅಂಶ ಮಂಡಿಸಿದ್ದಾರೆ. “ಹಿಂದೂ ಮಹಾಸಾಗರ ವ್ಯಾಪ್ತಿಯ ರಾಷ್ಟ್ರಗಳ ಜತೆ ತಾಂತ್ರಿಕವಾಗಿ ಮತ್ತು ಮೂಲ ಸೌಕರ್ಯದ ವ್ಯವಸ್ಥೆಯನ್ನು ಇತರ ರಾಷ್ಟ್ರಗಳಿಗೂ ನೀಡ ಬಹುದು. ಹಿಂದಿನ ಸಂದರ್ಭಗಳಲ್ಲೂ ನೆರೆ ರಾಷ್ಟ್ರಗಳಿಗೆ ಮೊದಲ ಆದ್ಯತೆ ಎಂಬ ನೆಲೆಯಲ್ಲಿ ಪರಸ್ಪರ ಸಹಕಾರ ನೀಡಿ ದ್ದೇವೆ. ಆದರೆ ಭಾರತ ಕೆಲ ಕ್ಷೇತ್ರಗಳಲ್ಲಿ ನಿರೀಕ್ಷಿತ ಪರಿಣತಿ ಸಾಧಿಸಿಲ್ಲ. ಅದರಲ್ಲಿ ಭಾರತ ಬೆಳವಣಿಗೆ ಸಾಧಿಸುವುದರ ಜತೆಗೆ ಇತರ ರಾಷ್ಟ್ರಗಳೂ ಅದರ ಲಾಭ ಪಡೆಯಲು ಬಯಸುತ್ತೇವೆ. ಸಹಕಾರ ತತ್ವದ ಅಡಿ ಈ ಯೋಜನೆ ಜಾರಿಗೆ ಬಯಸಿದ್ದೇವೆಯೇ ಹೊರತು, ನೌಕಾಪಡೆಗಳ ನಡುವಿನ ಮೈತ್ರಿಕೂಟ ಅಥವಾ ಯಾವುದೇ ರಾಷ್ಟ್ರದ ವಿರುದ್ಧ ಅಲ್ಲ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ