ಅಜಿತನ ‘ಸಾಹಸ’ದ ಬಗ್ಗೆ ಪವಾರ್ಗೆ ಗೊತ್ತಿತ್ತು ; ಫಡ್ನವೀಸ್ ಹೊಸ ಬಾಂಬ್
Team Udayavani, Dec 8, 2019, 9:22 PM IST
ಮುಂಬೈ: ನಾಟಕೀಯ ತಿರುವುಗಳನ್ನು ಕಂಡ ಮಹಾರಾಷ್ಟ್ರ ಸರ್ಕಾರ ರಚನೆಯ ಗೊಂದಲ ಮುಗಿದು ಎಲ್ಲವೂ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸರ್ಕಾರ ರಚಿಸುವಂತೆ ನಮ್ಮನ್ನು ಸಂಪರ್ಕಿಸಿದ್ದೇ ಅಜಿತ್ ಪವಾರ್. ಅವರು ತಾವಾಗಿಯೇ ನಮ್ಮ ಬಳಿ ಬಂದಿದ್ದರು. ಅಷ್ಟೇ ಅಲ್ಲ, ಈ ಎಲ್ಲ ವಿಚಾರವೂ ಎನ್ಸಿಪಿ ವರಿಷ್ಠ ಶರದ್ ಪವಾರ್ಗೆ ಗೊತ್ತಿತ್ತು ಎಂದು ಫಡ್ನವೀಸ್ ಹೇಳಿದ್ದಾರೆ.
ಮರಾಠಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಫಡ್ನವೀಸ್ ಈ ವಿಚಾರ ತಿಳಿಸಿದ್ದಾರೆ. “ನಾವು ಬಿಜೆಪಿ ಜತೆ ಕೈಜೋಡಿಸಲು ಇಚ್ಛಿಸುತ್ತೇವೆ ಎಂದು ಎನ್ಸಿಪಿಯ ಬಹುತೇಕ ಶಾಸಕರು ಹೇಳುತ್ತಿದ್ದಾರೆ ಎಂದು ಅಜಿತ್ ಪವಾರ್ ನನ್ನೊಂದಿಗೆ ಹೇಳಿದರು. ನಾವು ಯಾವುದೇ ಶಾಸಕರನ್ನು ಖರೀದಿಸಲು ಯತ್ನಿಸಿಲ್ಲ. ಯಾವ ಪಕ್ಷವನ್ನೂ ಒಡೆಯಲು ಮುಂದಾಗಿಲ್ಲ. ಸ್ವತಃ ಅಜಿತ್ ಅವರೇ ನಮ್ಮ ಬಳಿ ಬಂದು, ಎನ್ಸಿಪಿಯ ಎಲ್ಲ ಶಾಸಕರೂ ಬಿಜೆಪಿ ಜತೆ ಬರಲು ಸಿದ್ಧವಾಗಿದ್ದಾರೆ ಎಂದರು. ಅಲ್ಲದೆ, ಈ ಎಲ್ಲ ವಿಷಯ ಶರದ್ ಪವಾರ್ರಿಗೂ ತಿಳಿಸಿದ್ದೇನೆ ಎಂದೂ ಹೇಳಿದರು’ ಎಂದಿದ್ದಾರೆ ಫಡ್ನವೀಸ್.
ಸಮಯ ಬಂದಾಗ ಉತ್ತರಿಸುವೆ:
ಇದೇ ವೇಳೆ, “ಪ್ರಧಾನಿ ಮೋದಿ ನೀಡಿದ ಆಫರ್ ಅನ್ನು ತಿರಸ್ಕರಿಸಿದೆ’ ಎಂದು ಇತ್ತೀಚೆಗೆ ಶರದ್ ಪವಾರ್ ಹೇಳಿದ್ದರು. ಆದರೆ, ಪವಾರ್ ಹೇಳಿರುವುದು ಅರ್ಧ ಸತ್ಯ. ಪ್ರಧಾನಿ ಮೋದಿ ಮತ್ತು ಪವಾರ್ ನಡುವೆ ನಡೆದ ಸಂಭಾಷಣೆಯ ಬಗ್ಗೆ ನನಗೆ ಗೊತ್ತಿದೆ. ಈಗ ಅದನ್ನು ಬಹಿರಂಗಪಡಿಸುವುದು ಅಸಾಧ್ಯ. ಸಮಯ ಬಂದಾಗ ನಾನೇ ಅದನ್ನು ಹೇಳುತ್ತೇನೆ ಎಂದೂ ಫಡ್ನವೀಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ